ಸಿಗಂದೂರಿನ ಶರಾವತಿ ಹಿನ್ನೀರಿನಲ್ಲಿ ಸಿಲುಕಿಕೊಂಡ ಲಾಂಚ್!

Update: 2020-08-06 07:18 GMT

ಶಿವಮೊಗ್ಗ, ಆ.6: ಅತಿಯಾದ ಗಾಳಿಯಿಂದಾಗಿ ಶರಾವತಿ ನದಿ ಹಿನ್ನೀರಿನ ನಡುವೆ ಹಸಿರುಮಕ್ಕಿ ಲಾಂಚ್ ಸಿಲುಕಿಕೊಂಡಿದೆ ಎಂದು ವರದಿಯಾಗಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂದೂರು ಹಸಿರುಮಕ್ಕಿ ದಡದಿಂದ ನಿಟ್ಟೂರು ಕಡೆ ಹೊರಟ ಲಾಂಚ್ ಅತಿಯಾದ ಗಾಳಿಯಿಂದಾಗಿ ನದಿಯ ನಡುವಿನಲ್ಲಿ ನಡೆಯುತ್ತಿರುವ ಸೇತುವೆ ಕಾಮಗಾರಿಯ ಪಿಲ್ಲರ್ ಗೆ ಸಿಲುಕಿಕೊಂಡಿದೆ ಎಂದು ತಿಳಿದು ಬಂದಿದೆ.

ಲಾಂಚ್ ನಲ್ಲಿರುವ ಪ್ರಯಾಣಿಕರು ಅತಂತ್ರರಾಗಿದ್ದು, ಮೊಬೈಲ್ ಸಂಪರ್ಕಕ್ಕೆ ಸಿಗದೇ ಲಾಂಚ್ ನಲ್ಲಿರುವ ಪ್ರಯಾಣಿಕರ ಪರದಾಡುವಂತಾಗಿದೆ. ಕ್ರೈನ್ ಮೂಲಕ ಲಾಂಚ್ ದಡಕ್ಕೆ ತರಲು ಪ್ರಯತ್ನ ನಡೆಯುತ್ತಿದೆ ಎಂದು ತಿಳಿದುಬಂದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News