ನಾಳೆ ಎಸೆಸೆಲ್ಸಿ ಫಲಿತಾಂಶ ಪ್ರಕಟ ಎಂಬ ವದಂತಿ ಬಗ್ಗೆ ಸಚಿವ ಸುರೇಶ್‍ ಕುಮಾರ್ ಸ್ಪಷ್ಟನೆ

Update: 2020-08-06 11:40 GMT

ಬೆಂಗಳೂರು, ಆ.6: ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ನಾಳೆ ಪ್ರಕಟವಾಗುತ್ತದೆ ಎಂಬ ಸುದ್ದಿ ಸತ್ಯವಲ್ಲ. ಫಲಿತಾಂಶದ ದಿನಾಂಕವನ್ನು ಇನ್ನು ನಿಶ್ಚಯ ಮಾಡಿಲ್ಲವೆಂದು ಶಿಕ್ಷಣ ಸಚಿವ ಸುರೇಶ್‍ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಎಸೆಸೆಲ್ಸಿ ಫಲಿತಾಂಶ ದಿನಾಂಕ ಇನ್ನು ನಿಗದಿಯಾಗಿಲ್ಲ. ಹೀಗಾಗಿ ನಾಳೆಯೇ ಎಸೆಸೆಲ್ಸಿ ಫಲಿತಾಂಶ ಎಂಬ ಸುದ್ದಿ ಸತ್ಯವಲ್ಲ ಎಂದು ಅಧಿಕೃತವಾಗಿ ತಿಳಿಸುವ ಮೂಲಕ ವಿದ್ಯಾರ್ಥಿ ಹಾಗೂ ಪೋಷಕರಲ್ಲಿದ್ದ ಗೊಂದಲವನ್ನು ನಿವಾರಿಸಿದ್ದಾರೆ.

ಕಳೆದ ತಿಂಗಳು ಸಚಿವ ಸುರೇಶ್‍ಕುಮಾರ್, ಆಗಸ್ಟ್ ಮೊದಲ ವಾರದಲ್ಲಿ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಹೇಳಿಕೆ ನೀಡಿದ್ದರು. ಆದರೆ, ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಐದು-ಆರು ದಿನ ಲಾಕ್‍ಡೌನ್ ಘೋಷಿಸಿದ ಪರಿಣಾಮವಾಗಿ ಮೌಲ್ಯಮಾಪನ ತಡವಾಗಿ ಫಲಿತಾಂಶದ ದಿನಾಂಕ ಮುಂದೂಡಿಕೆ ಆಗಿರಬಹುದು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News