ತನ್ನನ್ನು ನೋಡಿಕೊಳ್ಳುತ್ತಿದ್ದ ಸೇವಕನನ್ನು ತುಳಿದು ಸಾಯಿಸಿದ ಮೈಸೂರು ಮೃಗಾಲಯದ ಆನೆ

Update: 2020-08-08 04:07 GMT

ಮೈಸೂರು, ಆ.8: ಮೈಸೂರು ಮೃಗಾಲಯದಲ್ಲಿ ಆನೆಯೊಂದು ತನ್ನನ್ನು ನೋಡಿಕೊಳ್ಳುತ್ತಿದ್ದ ಸೇವಕನನ್ನೇ ತುಳಿದು ಸಾಯಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಲಲಿತಾದ್ರಿಪುರದ ನಿವಾಸಿ ಹರೀಶ್ (38) ಆನೆ ತುಳಿತಕ್ಕೆ ಒಳಗಾಗಿ ಮೃತಪಟ್ಟವರು ಎಂದು ತಿಳಿದು ಬಂದಿದೆ.

ಹರೀಶ ಕಳೆದ ಐದು ದಿನಗಳಿಂದ ರಜೆಯಲ್ಲಿದ್ದು ಶುಕ್ರವಾರ ಕೆಲಸಕ್ಕೆ ಹಾಜರಾಗಿದ್ದರು. ಈ ಹಿಂದಿನಂತೆ ಕಳೆದ ರಾತ್ರಿ ಆನೆಯ ಮೈದಡವಿ ಆಹಾರ ನೀಡುವ ಸಂದರ್ಭದಲ್ಲಿ ಆನೆ ಆತನನ್ನು ಏಕಾಏಕಿ ತುಳಿದು ಸೊಂಡಿಲಿನಿಂದ ಎತ್ತಿ ಬಿಸಾಕಿದೆ. ಇದರಿಂದ ಕಂಗಾಲಾದ ಇತರ ಸಿಬ್ಬಂದಿ ತಕ್ಷಣ ಹರೀಶ್ ನನ್ನು ಆನೆಯಿಂದ ಬಿಡಿಸಿ ಸಮೀಪದಲ್ಲಿರುವ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹರೀಶ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂಬಂಧ ನಝರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News