ಆತ್ಮವಿಲ್ಲದೇ ನಿರ್ಜೀವಗೊಂಡ ಸರಕಾರದಿಂದ ಏನನ್ನೂ ನಿರೀಕ್ಷಿಸಲಾಗದು: ಮಾಜಿ ಸಚಿವೆ ಉಮಾಶ್ರೀ

Update: 2020-08-08 17:39 GMT

ಕೊಪ್ಪಳ, ಆ.8: ಆತ್ಮವನ್ನೇ ಕಳೆದುಕೊಂಡು ನಿರ್ಜೀವವಾಗಿರುವ ಬಿಜೆಪಿ ಸರಕಾರದಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲವೆಂದು ಮಾಜಿ ಸಚಿವೆ ಉಮಾಶ್ರೀ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸೋಂಕಿಗೆ ತುತ್ತಾಗಿರುವ ರೋಗಿಗಳಿಗೆ ಬೆಡ್ ಸಿಗುತ್ತಿಲ್ಲ. ಬಡ ರೋಗಿಗಳನ್ನು ಯಾರು ಮುಟ್ಟುತ್ತಿಲ್ಲ. ರೋಗಿಗಳು ಬೀದಿಯಲ್ಲೇ ನರಳಿ-ನರಳಿ ಸಾಯುತ್ತಿದ್ದರೂ ರಾಜ್ಯ ಸರಕಾರ ಮಾತ್ರ ಕಣ್ಮುಚ್ಚಿ ಧ್ಯಾನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋವಿಡ್-19ರಲ್ಲೂ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ. ಮುಂದಿನ ಅಧಿವೇಶನದಲ್ಲಿ ಇವೆಲ್ಲ ವಿಷಯಗಳು ಕುರಿತು ಪ್ರಶ್ನಿಸಿ, ಅವರ ಮುಖವಾಡವನ್ನು ಕಳುಚುತ್ತೇವೆಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News