ಬನ್ನೇರುಘಟ್ಟದ ಆನೆ ಮರಿಗೆ ಇನ್‌ಫೋಸಿಸ್ ಮುಖ್ಯಸ್ಥೆ 'ಸುಧಾಮೂರ್ತಿ' ಹೆಸರು ನಾಮಕರಣ

Update: 2020-08-27 17:06 GMT

ಆನೇಕಲ್,ಆ.27: ಬನ್ನೇರುಘಟ್ಟ ಉದ್ಯಾನದ ಮರಿ ಆನೆಗೆ ಇನ್‌ಫೋಸಿಸ್‌‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರ ಹೆಸರನ್ನು ಇಡಲಾಯಿತು. 

ಕಳೆದ ಆ.17ರಂದು ಸುವರ್ಣ ಎಂಬ ಆನೆಗೆ ಜನಿಸಿದ ಮರಿಗೆ ಹೆಸರನ್ನಿಡಲು ಹತ್ತು ಹಲವು ಸಲಹೆಗಳು ಬಂದ ಹಿನ್ನಲೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ಅವರಿಂದ ಇಂದು ಸುಧಾಮೂರ್ತಿ ಅವರ ಹೆಸರನ್ನು ನಾಮಕರಣ ಮಾಡಲಾಯಿತು.

ಕಳೆದ ನಾಲ್ಕು ವರ್ಷದಿಂದ ಜಿರಾಫೆ, ಝೀಬ್ರಾ ಮತ್ತು ಹುಲಿ ಆವರಣವನ್ನು ಕೊಡುಗೆ ನೀಡಿದ ಸುಧಾಮೂರ್ತಿ ಉದ್ಯಾನದ ಪ್ರಗತಿಗೆ ಶ್ರಮಿಸಿ ಅಪಾರ ಕಾಳಜಿ ಹೊಂದಿದ್ದಾರೆ ಎಂದು ಉದ್ಯಾನದ ಅಧಿಕಾರಿ-ಸಿಬ್ಬಂದಿ ವರ್ಗ ಶ್ಲಾಘಿಸಿದ್ದಾರೆ. ಅಲ್ಲದೆ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿಕೊಡುವ ಮೂಲಕ ಉದಾರತೆ ಮೆರೆದ ಸುಧಾಮೂರ್ತಿಯವರ ಹೆಸರನ್ನು ಆನೆ ಮರಿಗೆ ಇಡಲು ಸಂತಸ ವ್ಯಕ್ತವಾಯಿತೆಂದು ವನಶ್ರೀ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News