ಕ್ಯಾಸಿನೋ ಅಡ್ಡೆ ಮೇಲೆ ದಾಳಿ: 27 ಮಂದಿ ಬಂಧನ, ನಗದು ವಶ

Update: 2020-08-29 15:52 GMT

ಬೆಂಗಳೂರು, ಆ.29: ಇಲ್ಲಿನ ಇಂದಿರಾನಗರದಲ್ಲಿ ಕಾನೂನು ಬಾಹಿರ ನಡೆಯುತ್ತಿದ್ದ ಕ್ಯಾಸಿನೋ ಅಡ್ಡೆ ಮೇಲೆ ಮೇಲೆ ದಾಳಿ ನಡೆಸಿರುವ ಪೊಲೀಸರು 27 ಜನರನ್ನು ಬಂಧಿಸಿ, 3 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದಾರೆ.

ಇಂದಿರಾನಗರದಲ್ಲಿ ಶ್ರೀನಿವಾಸ್, ಚಲಘಟ್ಟ ಚಂದ್ರ, ಮುರಳಿ ಎನ್ನುವವರ ಪಾಲುದಾರಿಕೆಯಲ್ಲಿ ಆ.5ರಂದು ಕ್ಯಾಸಿನೋ ಶುರುವಾಗಿತ್ತು. ರೋಲೆಟ್, ಅಂದರ್ ಬಾಹರ್, ಎಲೆಕ್ಟ್ರಾನಿಕ್ ಪೋಕರ್, ಪಿನ್ ಬಾಲ್ ಸೇರಿದಂತೆ ಹಲವು ರೀತಿಯ ಕಾನೂನು ಬಾಹಿರ ಜೂಜು ಇಲ್ಲಿ ನಡೆಯುತ್ತಿತ್ತು ಎನ್ನಲಾಗಿದೆ.

ಈ ಸಂಬಂಧ ಮಾಹಿತಿ ಸಂಗ್ರಹಿಸಿ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ನೇತೃತ್ವದ ತಂಡವು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News