ಶಿವಮೊಗ್ಗ ಭದ್ರಾವತಿ ರೈಲ್ವೆ ಕ್ರಾಸಿಂಗ್ ತಾತ್ಕಾಲಿಕ ಬಂದ್: ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ

Update: 2020-09-01 11:14 GMT

ಶಿವಮೊಗ್ಗ, ಸೆ.1: ಶಿವಮೊಗ್ಗ- ಭದ್ರಾವತಿ ರೈಲ್ವೆ ಕ್ರಾಸಿಂಗ್ ಗೇಟ್ ನಂ. 38ರ ಶಿವಮೊಗ್ಗದಿಂದ ಹೊನ್ನವಿಲೆ-ಹೊನ್ನವಿಲೆಯಿಂದ ಮಾಚೇನಹಳ್ಳಿ ಮತ್ತು ಮಾಚೇನಹಳ್ಳಿಯಿಂದ ಹೊನ್ನವಿಲೆಗೆ ಸಂಚರಿಸುವ ಮಾರ್ಗದಲ್ಲಿ ತಾಂತ್ರಿಕವಾಗಿ ಪರಿಶೀಲನೆ ಮಾಡುವುದರಿಂದ ಸೆಪ್ಟಂಬರ್ 2 ರಂದು ಬೆಳಗ್ಗೆ 8.00 ರಿಂದ ರಾತ್ರಿ 8.00 ಗಂಟೆವರಿಗೆ ರಸ್ತೆ ಸಂಚಾರವನ್ನು ಲೆವೆಲ್ ಕ್ರಾಸ್ ನಂ. 38ಎ ಮಜ್ಜಿಗೇನಹಳ್ಳಿ-ಮಾಚೇನಹಳ್ಳಿ ಮುಖಾಂತರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶದಲ್ಲಿ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News