ಗವಿಸಿದ್ದ ಎನ್.ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ

Update: 2020-09-03 11:13 GMT

ಬೆಂಗಳೂರು, ಆ.3: 2020ನೇ ಸಾಲಿನ ನಾಡಕವಿ ಗವಿಸಿದ್ದ ಎನ್.ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿಯು 5 ಸಾವಿರ ರೂ.ನಗದು ಹಾಗೂ ಬೆಳ್ಳಿ ಪದಕವನ್ನು ಒಳಗೊಂಡಿದೆ. 

ಆಯ್ಕೆಯಾದ ಹಸ್ತಪ್ರತಿಯನ್ನು ತಳಮಳ ಪ್ರಕಾಶನದಿಂದ ಮುದ್ರಿಸಲಾಗುವುದು. ಹಸ್ತಪ್ರತಿಯ ಯಾವುದೇ ಪುಟದಲ್ಲಿ ಕವಿಗಳು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ನಮೂದಿಸಬಾರದು. ಈ ವಿವರಗಳು ಪ್ರತ್ಯೇಕ ಪುಟದಲ್ಲಿರುವಂತೆ ಗಮನ ವಹಿಸಬೇಕು. ಪ್ರಶಸ್ತಿಗಾಗಿ ಕಳುಹಿಸಿದ ಹಸ್ತಪ್ರತಿಗಳನ್ನು ಮರಳಿಸಲಾಗುವುದಿಲ್ಲ.
ಹಸ್ತಪ್ರತಿ ಕಳುಹಿಸಲು ಸೆ.9 ಕೊನೆಯ ದಿನವಾಗಿದೆ. ಹಸ್ತಪ್ರತಿಗಳನ್ನು ಕಳುಹಿಸುವ ವಿಳಾಸ: ಮಹೇಶ ಬಳ್ಳಾರಿ, ಜವಾಹರರಸ್ತೆ, ಕೊಪ್ಪಳ-583231 ಆಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ದೂ.9008996624ಕ್ಕೆ ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News