ಇದಿನಬ್ಬ ಹಾಜಿ ದೇರಳಕಟ್ಟೆ

Update: 2020-09-03 13:28 GMT

ಉಳ್ಳಾಲ: ದೇರಳಕಟ್ಟೆ ನಿವಾಸಿ ಡಿ.ಇದಿನಬ್ಬ ಹಾಜಿ ದೇರಳಕಟ್ಟೆ  (79) ಅವರು ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾದರು.

ಹಿರಿಯ ರಾಜಕೀಯ ನಾಯಕರಾಗಿದ್ದ ಅವರು ಎರಡು ಅವಧಿಗೆ ಬೆಳ್ಮ ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಬದ್ರಿಯಾ ಜುಮಾ ಮಸ್ಜಿದ್ ಗೌರವಾಧ್ಯಕ್ಷರಾಗಿ, ಎಸ್ಕೆಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆಯ ನಿರ್ದೇಶಕರಾಗಿ, ಊರಿನ ವಿವಿಧ ಸಂಘ ಸಂಸ್ಥೆಗಳ ಮಾರ್ಗದರ್ಶರಾಗಿದ್ದರು. 

ಮೃತರು ಪತ್ನಿ ಐವರು ಪುತ್ರಿಯರು, ಮೂವರು ಪುತ್ರರು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 

ಅವರ ನಿಧನಕ್ಕೆ ಶಾಸಕ ಯು.ಟಿ ಖಾದರ್, ಟಿ.ಎಸ್  ಅಬ್ದುಲ್ಲ , ಬೆಳ್ಮ ಗ್ರಾಮ ಮಾಜಿ ಅಧ್ಯಕ್ಷ ಯೂಸುಫ್ ಬಾವ , ಮಾಜಿ ಉಪಾಧ್ಯಕ್ಷ,
 ಸಿ.ಎಮ್  ಸತ್ತಾರ್ , ಮಾಜಿ ಸದಸ್ಯ ಕಬೀರ್  ಡಿ, ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷ ಅಬ್ಬಾಸ್ ಹಾಜಿ, ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಹಯಾತುಲ್ ಇಸ್ಲಾಂ ಮದರಸದ ಅಧ್ಯಕ್ಷ ಡಿ.ಎ ಅಶ್ರಫ್  ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ