ರಾಜ್ಯದಲ್ಲಿ ಹೊಸದಾಗಿ 9,540 ಕೊರೋನ ಪ್ರಕರಣಗಳು ದೃಢ: 128 ಮಂದಿ ಸಾವು

Update: 2020-09-09 15:32 GMT

ಬೆಂಗಳೂರು, ಸೆ.9: ರಾಜ್ಯದಲ್ಲಿ ಬುಧವಾರ 9,540 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 128 ಜನರು ಸೋಂಕಿಗೆ ಬಲಿಯಾಗಿದ್ದು, 6,860 ಜನರು ಗುಣಮುಖರಾಗಿದ್ದಾರೆ.

ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 4,21,730ಕ್ಕೆ ತಲುಪಿದ್ದು, 776 ಸೋಂಕಿತರು ಐಸಿಯುನಲ್ಲಿದ್ದಾರೆ.

ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 6,808ಕ್ಕೆ ತಲುಪಿದ್ದು, ಅನ್ಯ ಕಾರಣದಿಂದ 19 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 99,470ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

128 ಸೋಂಕಿತರು ಬಲಿ: ಬಾಗಲಕೋಟೆ 2, ಬಳ್ಳಾರಿ -6, ಬೆಳಗಾವಿ-5, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 41, ಬೀದರ್ 2, ಚಾಮರಾಜನಗರ 1, ಚಿಕ್ಕಮಗಳೂರು 2, ಚಿತ್ರದುರ್ಗ 2, ದಕ್ಷಿಣ ಕನ್ನಡ 6, ದಾವಣಗೆರೆ 2, ಧಾರವಾಡ 1, ಗದಗ 2, ಹಾಸನ 4, ಹಾವೇರಿ 2,  ಕಲಬುರ್ಗಿ 2, ಕೊಡಗು 1, ಕೋಲಾರ 1, ಕೊಪ್ಪಳ 6, ಮಂಡ್ಯ 3, ಮೈಸೂರು 13, ರಾಯಚೂರು 3, ಶಿವಮೊಗ್ಗ 6, ತುಮಕೂರು 5, ಉಡುಪಿ 1, ಉತ್ತರ ಕನ್ನಡ 2, ವಿಜಯಪುರ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.  

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 9,540 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 219, ಬಳ್ಳಾರಿ 559, ಬೆಳಗಾವಿ 390, ಬೆಂಗಳೂರು ಗ್ರಾಮಾಂತರ 79, ಬೆಂಗಳೂರು ನಗರ 3,419, ಬೀದರ್ 59, ಚಾಮರಾಜನಗರ 60, ಚಿಕ್ಕಬಳ್ಳಾಪುರ 141, ಚಿಕ್ಕಮಗಳೂರು 73, ಚಿತ್ರದುರ್ಗ 94, ದಕ್ಷಿಣ ಕನ್ನಡ 310, ದಾವಣಗೆರೆ 255, ಧಾರವಾಡ 226, ಗದಗ 155, ಹಾಸನ 270, ಹಾವೇರಿ 169, ಕಲಬುರ್ಗಿ 241, ಕೊಡಗು 60, ಕೋಲಾರ 97, ಕೊಪ್ಪಳ 150, ಮಂಡ್ಯ 224, ಮೈಸೂರು 500, ರಾಯಚೂರು 214, ರಾಮನಗರ 109, ಶಿವಮೊಗ್ಗ 555, ತುಮಕೂರು 242, ಉಡುಪಿ 258, ಉತ್ತರ ಕನ್ನಡ 260, ವಿಜಯಪುರ 57, ಯಾದಗಿರಿ ಜಿಲ್ಲೆಯಲ್ಲಿ 95 ಪ್ರಕರಣಗಳು ಪತ್ತೆಯಾಗಿವೆ.

ಕೊರೋನ ಸೋಂಕಿಗೆ ಸಿಪಿಐ ಬಲಿ

ಕೊರೋನ ಸೋಂಕಿಗೆ ಬುಧವಾರ ಕಲಬುರ್ಗಿ ಜಿಲ್ಲೆಯ ಪೊಲೀಸ್ ತರಬೇತಿ ಕೇಂದ್ರದ ಸರ್ಕಲ್ ಇನ್ಸ್ ಪೆಕ್ಟರೊಯೊಬ್ಬರು ಬಲಿಯಾಗಿದ್ದಾರೆ. ಇದೇ ವರ್ಷದ ಜನವರಿಯಲ್ಲಿ ಕಲಬುರ್ಗಿ ಜಿಲ್ಲೆಯ ನಾಗೇನಹಳ್ಳಿ ಪೊಲೀಸ್ ತರಬೇತಿ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News