ನಿಯಮ ಉಲ್ಲಂಘಿಸಿ ರಸಗೊಬ್ಬರ ಮಾರಾಟ: 7 ಅಂಗಡಿಗಳ ಪರವಾನಗಿ ರದ್ದು

Update: 2020-09-13 18:21 GMT

ಬಳ್ಳಾರಿ, ಸೆ. 13: ಕಂಪ್ಲಿ ಪಟ್ಟಣದಲ್ಲಿ ನಿಯಮಬಾಹಿರವಾಗಿ ರೈತರಿಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದ 7 ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ.

ಕಂಪ್ಲಿಯ ನಾರಾಯಣ ಟ್ರೇಡರ್ಸ್, ಕಂಪ್ಲಿ ನಮ್ಮ ಗ್ರೋಮೋರ್ ಕೇಂದ್ರ, ಎಮ್ಮಿಗನೂರು ನಮ್ಮ ಗ್ರೋಮೋರ್ ಕೇಂದ್ರ, ಕೋದಂಡರಾಮ ಎಂಟರ್‍ಪ್ರೈಜಸ್, ಎಂ ಆರ್ ಟ್ರೇಡಿಂಗ್ ಕಂಪನಿ, ವೆಂಕಟಕೃಷ್ಣ ಟ್ರೇಡಿಂಗ್ ಕಂಪೆನಿ, ಎಮ್ಮಿಗನೂರು ಜಡೆ ಸಿದ್ದೇಶ್ವರ ಟ್ರೇಡರ್ಸ್ ಸೇರಿ ಒಟ್ಟು ಏಳು ಅಂಗಡಿಗಳ ಪರವಾನಿಗೆ ರದ್ದು ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಾರಾಟಗಾರರು ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿದ್ದರು. ಅಲ್ಲದೇ, ಒಬ್ಬರಿಗೆ ಮಾತ್ರ ರಸಗೊಬ್ಬರವನ್ನು ಮಿತಿಮೀರಿ ಮಾರಾಟ ಮಾಡುವುದು. ಜೊತೆಗೆ ಖರೀದಿಸಿದ ರಸಗೊಬ್ಬರ ರಶೀದಿ ನೀಡುತ್ತಿರಲಿಲ್ಲ. ಹೀಗಾಗಿ, ಪರವಾನಿಗೆ ರದ್ದು ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News