ಈ ಸೇಡಿನ ವಿರುದ್ಧ ಧ್ವನಿ ಎತ್ತದಿದ್ದರೆ ನಾಚಿಕೆಗೇಡು: ಪ್ರಕಾಶ್ ರಾಜ್
Update: 2020-09-14 06:14 GMT
ಹೊಸದಿಲ್ಲಿ, ಸೆ.14: ಜೆಎನ್ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ರನ್ನು ಈ ವರ್ಷದ ಫೆಬ್ರವರಿಯಲ್ಲಿ ನಡೆದ ದಿಲ್ಲಿ ಗಲಭೆಗೆ ಸಂಬಂಧಿಸಿ ದಿಲ್ಲಿ ಪೊಲೀಸರು ಇಂದು ಬಂಧಿಸಿದ್ದು, ಖಾಲಿದ್ ಬಂಧನವನ್ನು ಬಹುಭಾಷಾ ನಟ ಪ್ರಕಾಶ್ ರಾಜ್ ಟ್ವೀಟ್ ಮೂಲಕ ವಿರೋಧಿಸಿದ್ದಾರೆ.
''ಶೇಮ್...ಇಂತಹ ಸೇಡಿನ ವಿರುದ್ಧವಾಗಿ ನಾವು ಈಗ ಧ್ವನಿ ಎತ್ತದೇ ಇದ್ದರೆ ನಮಗೆ ನಾಚಿಕೆಯಾಗಬೇಕು'' ಎಂದು ಬರೆದಿರುವ ಅವರು, #StandWithUmarKhalid #FreeUmarKhalid #justasking ಎಂದು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
SHAME..if we don’t raise our VOICE against this WITCH-HUNT now.. we should be ASHAMED ..#StandWithUmarKhalid #FreeUmarKhalid #justasking pic.twitter.com/5QwSLlivb1
— Prakash Raj (@prakashraaj) September 14, 2020