ಜಿಂಕೆ ಬೇಟೆಯಾಡಿದ ಆರೋಪ : ಇಬ್ಬರ ಬಂಧನ

Update: 2020-09-21 17:20 GMT

ಮಡಿಕೇರಿ ಸೆ.21 : ಕಾಡಿನಲ್ಲಿ ಜಿಂಕೆ ಬೇಟೆಯಾಡಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಜಿಂಕೆ ಭೇಟೆಯಾಡಿದ ಖಚಿತ ಮಾಹಿತಿ ದೊರೆತು ಕೇಂಬುಕೊಲ್ಲಿ ಬಳಿಯ ಆನೆಕಂದಕದ ಬಳಿ ಅರಣ್ಯ ಇಲಾಖೆಯ ಕಾರ್ಯಪಡೆ ಎನ್.ಬಿ.ಮನು ಹಾಗೂ ಮಂಜು ಎಂಬವರನ್ನು ಬಂಧಿಸಿದೆ. ಪಿ.ಯು.ಪೂವಯ್ಯ ಹಾಗೂ ರಾಜು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಧಿತರಿಂದ  ಜಿಂಕೆ ಮಾಂಸ, ಜಿಂಕೆ ಚರ್ಮ, ಕೊಂಬು, ಕೋವಿ ಹಾಗೂ ಕತ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಪರಾರಿಯಾದ ಆರೋಪಿಗಳ ಬಂಧನಕ್ಕೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ನೇತೃತ್ವದಲ್ಲಿ ಉಪವಲಯ ಸಂರಕ್ಷಣಾಧಿಕಾರಿ ಸತೀಶ್, ಯೋಗೇಶ್ವರ್, ಶಶಿಕುಮಾರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News