ಶರದ್ ಪವಾರ್‌ಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್

Update: 2020-09-22 13:38 GMT

ಮುಂಬೈ, ಸೆ.22: ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ತನ್ನ ಚುನಾವಣಾ ಅಫಿಡವಿಟ್‌ಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆಯು ತನಗೆ ನೋಟಿಸ್‌ನ್ನು ನೀಡಿದೆ ಎಂದು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಮಂಗಳವಾರ ಹೇಳಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪವಾರ್, ನಾನು ಸಲ್ಲಿಸಿರುವ ಕೆಲವು ಚುನಾವಣಾ ಅಫಿಡವಿಟ್‌ಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ಸ್ಪಷ್ಟೀಕರಣ ಹಾಗೂ ವಿವರಣೆ ನೀಡುವಂತೆ ಕೋರಿದೆ ಎಂದರು.

ನಾನು ನಿನ್ನೆ ನೋಟಿಸ್ ಸ್ವೀಕರಿಸಿದ್ದೇನೆ. ಅವರು(ಕೇಂದ್ರ ಸರಕಾರ)ಎಲ್ಲ ಸದಸ್ಯರ ಜೊತೆಗೆ ನಮ್ಮನ್ನೂ ಪ್ರೀತಿಸುತ್ತಿರುವುದು ನಮಗೆ ಖುಷಿ ತಂದಿದೆ ಎಂದು ವ್ಯಂಗ್ಯವಾಡಿದ ಪವಾರ್, ಚುನಾವಣಾ ಆಯೋಗದ ಸೂಚನೆಯ ಮೇರೆಗೆ ಐಟಿ ಇಲಾಖೆಯು ನೋಟಿಸ್ ಹೊರಡಿಸಿದೆ. ನಾವು ಅದಕ್ಕೆ ಉತ್ತರಿಸುತ್ತೇವೆ ’ ಎಂದ ಅವರು,ತನ್ನ ಪುತ್ರಿ ಹಾಗೂ ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಪರಿಸರ ಸಚಿವ ಆದಿತ್ಯ ಠಾಕ್ರೆ ಅವರಿಗೂ ಐಟಿ ಇಲಾಖೆಯು ನೋಟಿಸ್‌ಗಳನ್ನು ಜಾರಿಗೊಳಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News