ರಾಜ್ಯ ಸರಕಾರದಿಂದ ರೈತ ಹೋರಾಟಗಾರರ ಫೋನ್ ಕದ್ದಾಲಿಕೆ: ಮಾಜಿ ಶಾಸಕ ಕೋನರೆಡ್ಡಿ ಗಂಭೀರ ಆರೋಪ

Update: 2020-09-28 16:19 GMT

ಹುಬ್ಬಳ್ಳಿ, ಸೆ.28: ರಾಜ್ಯ ಸರಕಾರವು ರೈತ ಹೋರಾಟಗಾರರ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ರೈತ ಹೋರಾಟ ಹತ್ತಿಕ್ಕುವ ಹುನ್ನಾರ ನಡೆಸುತ್ತಿದ್ದು, ರೈತ ಹೋರಾಟಗಾರರ ಫೋನ್ ಟ್ಯಾಪ್ ಆಗುತ್ತಿದೆ. ರಾಜ್ಯ ಸರಕಾರ ರೈತ ಹೋರಾಟಗಾರರ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಭೂಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಕರ್ನಾಟಕ ಬಂದ್ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News