ಲಡಾಖ್‌ನಲ್ಲಿ ‘ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ’ ಎಂಬ ಪರಿಸ್ಥಿತಿ: ಐಎಎಫ್ ಮುಖ್ಯಸ್ಥ ಭದೌರಿಯ

Update: 2020-09-29 16:17 GMT

ಹೊಸದಿಲ್ಲಿ, ಸೆ. 29: ಉತ್ತರದ ಗಡಿಭಾಗಗಳಲ್ಲಿ ಈಗ ಅಶಾಂತಿ ನೆಲೆಸಿದ್ದು ‘ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ’ ಎಂಬ ಪರಿಸ್ಥಿತಿಯಿದೆ ಎಂದು ವಾಯುಪಡೆಯ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ಆರ್‌ಕೆಎಸ್ ಭದೌರಿಯಾ ಹೇಳಿದ್ದಾರೆ.

ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಪ್ರದೇಶದಲ್ಲಿ ಎದುರಾಗುವ ಯಾವುದೇ ದುಸ್ಸಾಹಸಕ್ಕೂ ಪ್ರತ್ಯುತ್ತರ ನೀಡಲು ಭಾರತೀಯ ವಾಯುಪಡೆ ಸನ್ನದ್ಧವಾಗಿದೆ. ನಮ್ಮ ಪಡೆಗಳು ಗಡಿಭಾಗದಲ್ಲಿ ಉದ್ಭವಿಸುವ ಯಾವುದೇ ಘಟನೆಯನ್ನೂ ಎದುರಿಸಲು ಸಿದ್ಧವಾಗಿದೆ ಎಂದರು.

ಇತ್ತೀಚೆಗೆ ಸೇರ್ಪಡೆಗೊಂಡಿರುವ ರಫೇಲ್ ಯುದ್ಧವಿಮಾನ, ಚಿನೂಕ್ ಮತ್ತು ಅಪಾಚೆ ಹೆಲಿಕಾಪ್ಟರ್‌ಗಳು, ಗ್ಲೋಬ್‌ಮಾಸ್ಟರ್ ಯುದ್ಧವಿಮಾನ ವಾಯುಪಡೆಯ ಬಲವನ್ನು ಹೆಚ್ಚಿಸಿದೆ. ಭವಿಷ್ಯದ ಯಾವುದೇ ಸಂಘರ್ಷದಲ್ಲೂ ನಮಗೆ ಲಭಿಸುವ ಗೆಲುವಿನಲ್ಲಿ ವಾಯುಪಡೆಯ ಪಾತ್ರ ಪ್ರಮುಖವಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News