ಬಾಬರಿ ಮಸೀದಿ ದ್ವಂಸ ಪ್ರಕರಣದ ತೀರ್ಪು: ಕೋರ್ಟ್ ಗೆ ಆಗಮಿಸಿದ 26 ಆರೋಪಿಗಳು

Update: 2020-09-30 05:54 GMT

ಹೊಸದಿಲ್ಲಿ: ಬಾಬರಿ ಮಸೀದಿ ದ್ವಂಸ ಪ್ರಕರಣದ ತೀರ್ಪು ಕೆಲ ಹೊತ್ತಿನಲ್ಲೇ ಪ್ರಕಟಗೊಳ್ಳಲಿದೆ. 32 ಆರೋಪಿಗಳ ಪೈಕಿ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ ನ್ಯಾಯಾಲಯಕ್ಕೆ ಗೈರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಜುಲೈ 24ರಿಂದ ಅಡ್ವಾಣಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಬಿಐ ಕೋರ್ಟ್  ಮುಂದೆ ಹೇಳಿಕೆ ನೀಡುತ್ತಿದ್ದರೆ, ಕೊರೋನ ಸೋಂಕಿಗೊಳಗಾದ ಉಮಾ ಭಾರತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಕ್ಷಿ ಮಹಾರಾಜ್ ಸೇರಿದಂತೆ 26 ಆರೋಪಿಗಳು ನ್ಯಾಯಾಲಯಕ್ಕೆ ಆಗಮಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News