ಹಿರಿಯ ಸಾಹಿತಿ, ಚಿಂತಕ ಡಾ. ಬಸವರಾಜ ಕಲ್ಗುಡಿಯವರಿಗೆ ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ

Update: 2020-10-07 13:02 GMT
ಡಾ. ಬಸವರಾಜ ಕಲ್ಗುಡಿ

ಬೆಂಗಳೂರು, ಅ.7: ಕನ್ನಡ ಪುಸ್ತಕ ಪ್ರಾಧಿಕಾರದ 2019ನೆ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ ಬಹುಮಾನಗಳಿಗೆ ಅರ್ಹರನ್ನು ಆಯ್ಕೆ ಮಾಡಲಾಗಿದ್ದು, ಇಂದಿನ ಸಭೆಯಲ್ಲಿ ಪ್ರಕಟಿಸಲಾಗಿದೆ. ಹಿರಿಯ ಸಾಹಿತಿ, ಚಿಂತಕ ಡಾ.ಬಸವರಾಜ ಕಲ್ಗುಡಿ ಅವರನ್ನು ಡಾ.ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಎಂ.ಎನ್.ನಂದೀಶ್ ಹಂಚೆ ಹೇಳಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರದಿಂದ ನೀಡಲಾಗುವ ಅತ್ಯುತ್ತಮ ಪ್ರಕಾಶನ ಪ್ರಶಸ್ತಿಯನ್ನು ಐಬಿಎಚ್ ಪ್ರಕಾಶನಕ್ಕೆ ನೀಡಲಾಗಿದೆ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಗೆ ಈ ವರ್ಷ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಸಿಂಧಗಿಯ ಎಂ.ಎನ್.ಪಡಶೆಟ್ಟಿ ಹಾಗೂ ಬೆಂಗಳೂರಿನ ಕೆ.ರಾಜಕುಮಾರ್ ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಅನುಪಮ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿಯನ್ನು ಡಾ.ಬಿ.ಎಂ. ಹೆಗ್ಗಡೆ ಅವರಿಗೆ ನೀಡಲಾಗಿದೆ. ಅತ್ಯುತ್ತಮ ಪ್ರಕಾಶನ ಪ್ರಶಸ್ತಿ 1 ಲಕ್ಷ ರೂ.ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಎಂ.ಎಂ.ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ 75 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ಡಾ. ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ 50 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಡಾ.ಅನುಪಮಾ ನಿರಂಜನ ವೈದ್ಯಕೀಯ ಹಾಗೂ ವಿಜ್ಞಾನ ಸಾಹಿತ್ಯ ಪ್ರಶಸ್ತಿ 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

ವಾರ್ಷಿಕ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನ: ಮೊದಲನೆ ಬಹುಮಾನ 25 ಸಾವಿರ ರೂ., ಸಪ್ನ ಬುಕ್ ಹೌಸ್ ಬೆಂಗಳೂರು(ಪ್ರಶಸ್ತಿ ಪುರಸ್ಕೃತರು), ಡಾ.ಬಿ.ಆರ್. ಅಂಬೇಡ್ಕರ್ ಮಹಾಮಾನವನ ಮಹಾಯಾನ(ಕೃತಿ), ಡಾ.ಸಿ.ಚಂದ್ರಪ್ಪ(ಲೇಖಕರು).

ಎರಡನೇ ಬಹುಮಾನ 20 ಸಾವಿರ ರೂ., ನಮ್ಮ ಪ್ರಕಾಶನ ತುಮಕೂರು(ಪ್ರಶಸ್ತಿ ಪುರಸ್ಕೃತರು), ಭೂಮಿಯೊಂದು ಮಹಾಬೀಜ(ಕೃತಿ), ಕೃಷ್ಣಮೂರ್ತಿ ಬಿಳಿಗೆರೆ(ಲೇಖಕರು).

ಮೂರನೇ ಬಹುಮಾನ 10 ಸಾವಿರ ರೂ., ಅಭಿರುಚಿ ಪ್ರಕಾಶನ ಮೈಸೂರು(ಪ್ರಶಸ್ತಿ ಪುರಸ್ಕೃತರು), ಬಂಗಾರದ ಮನುಷ್ಯರು ಭಾಗ-1 ಬೆಳಕಿನ ಬೇಸಾಯದ ಕಥಾನಕ(ಕೃತಿ) ಚಿನ್ನಸ್ವಾಮಿ ವಡ್ಡಗೆರೆ(ಲೇಖಕರು).

ಮಕ್ಕಳ ಪುಸ್ತಕ ಸೊಗಸು ಬಹುಮಾನ 8 ಸಾವಿರ ರೂ., ಚೈತ್ರೋದಯ ಪ್ರಕಾಶನ ಹಾಸನ(ಪ್ರಶಸ್ತಿ ಪುರಸ್ಕೃತರು), ಅರಳುವ ಹೂಗಳು(ಕೃತಿ),  ಸುಶೀಲಾ ಸೋಮಶೇಖರ್(ಲೇಖಕರು).

ಮುಖಪುಟ ಚಿತ್ರ ವಿನ್ಯಾಸ ಬಹುಮಾನ 10 ಸಾವಿರ ರೂ., ಬೆಂಗಳೂರಿನ ಕಿರಣ್ ಮಾಡಾಲು(ಬಹುಮಾನಿತ ಕಲಾವಿದ), ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ(ಕೃತಿ), ಎಸ್. ದಿವಾಕರ್(ಲೇಖಕರು).

ಮುಖಪುಟ ಚಿತ್ರ ಕಲೆಯ ಬಹುಮಾನ 8 ಸಾವಿರ ರೂ., ಪುಂಡಲೀಕ ಕಲ್ಲಿಗನೂರು(ಬಹುಮಾನಿತ ಕಲಾವಿದ), ಮಹಾವೃಕ್ಷ(ಕೃತಿ), ಬಿ.ಆರ್. ಪೊಲೀಸ್ ಪಾಟೀಲ್(ಲೇಖಕರು).

ಪುಸ್ತಕ ಮುದ್ರಣ ಸೊಗಸು ಬಹುಮಾನ 5 ಸಾವಿರ ರೂ., ಆಕೃತಿ ಪ್ರಿಂಟ್ಸ್ ಮಂಗಳೂರು, ವನ್ಯವರ್ಣ(ಕೃತಿ), ಗಣೇಶ ಅಮೀನಗಡ(ಲೇಖಕರು) ಇವರುಗಳನ್ನು ಬಹುಮಾನಗಳಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್‍ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News