6 ಡಿವೈಎಸ್ಪಿಗಳ ವರ್ಗಾವಣೆ

Update: 2020-10-09 13:08 GMT

ಬೆಂಗಳೂರು, ಅ.9: ಪೊಲೀಸ್ ಇಲಾಖೆಯ 6 ಡಿವೈಎಸ್ಪಿಗಳನ್ನ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.

ಶರಣಪ್ಪ ಅವರನ್ನು ಸಂಚಾರ ಉಪವಿಭಾಗ ಬೆಳಗಾವಿ ನಗರಕ್ಕೆ, ಎನ್. ನವೀನ್ ಕುಮಾರ್-ನಾಗಮಂಗಲ ಉಪ ವಿಭಾಗ ಮಂಡ್ಯ, ಕೆ. ಕೃಷ್ಣಮೂರ್ತಿ-ಭದ್ರಾವತಿ ಉಪವಿಭಾಗ ಶಿವಮೊಗ್ಗ, ಮಹಾಂತೇಶ್ವರ ಎಸ್. ಜಿದ್ದಿ-ಎಸಿಬಿ. ಕೆ.ಬಿ.ವಿಶ್ವನಾಥ್-ಕರ್ನಾಟಕ ಪೊಲೀಸ್ ಅಕಾಡೆಮಿ(ಮೈಸೂರು), ಸುಧಾಕರ್ ಸದಾನಂದ ನಾಯಕ್ ಅವರನ್ನು ಮುಂದಿನ ಸ್ಥಳ ನಿಯುಕ್ತಿಗಾಗಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕರ್ತವ್ಯಕ್ಕೆ ಸೇರುವಂತೆ ಆದೇಶ ನೀಡಲಾಗಿದೆ.

ವರ್ಗಾವಣೆಗೊಂಡ ಸಿಬ್ಬಂದಿ ತಕ್ಷಣದಿಂದಲೇ ನಿಗದಿತ ಸ್ಥಳದಲ್ಲಿ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಪೊಲೀಸ್ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News