ಎಫ್‍ಕೆಸಿಸಿಐ ಅಧ್ಯಕ್ಷರಾಗಿ ಪೆರಿಕಲ್ ಸುಂದರ್ ನೇಮಕ

Update: 2020-10-09 14:39 GMT

ಬೆಂಗಳೂರು, ಅ.9: ಎಫ್‍ಕೆಸಿಸಿಐನ ವ್ಯವಸ್ಥಾಪಕ ಮಂಡಳಿಯು ಇಂದು ಪೆರಿಕಲ್ ಎಂ.ಸುಂದರ್ ಅವರನ್ನು 2020-21 ರ ಎಫ್‍ಕೆಸಿಸಿಐ ಅಧ್ಯಕ್ಷರಾಗಿ ಅವಿರೋಧವಾಗಿ ನೇಮಕ ಮಾಡಲಾಗಿದೆ.

ಮಾಡರ್ನ್ ಕಾಫಿ ಕೋ ಸಂಸ್ಥೆ ಉದ್ಯಮ ಕುಟುಂಬವಾಗಿದ್ದು, 1993ರಿಂದಲೂ ಕಾಫಿ ವ್ಯವಹಾರದಲ್ಲಿ ಸುಂದರ್ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಅಲ್ಲದೆ ಕಾಫಿ ಟ್ರೇಡ್ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಪೆರಿಕಲ್ ಇಂಟರ್ ನ್ಯಾಷನಲ್ ಅಕಾಡೆಮಿ ಇನ್ಸ್ಟಿಟ್ಯೂಟ್ ಹಾಗೂ ಮಾಡರ್ನ್ ಬೆವರೇಜ್ಸ್ ಪ್ರಾಡಕ್ಟ್ಸ್ ಸಂಸ್ಥೆಗಳ ಸಹಬಾಗಿತ್ವ ಹೊಂದಿದ್ದಾರೆ.

ಸದ್ಯಕ್ಕೆ ಇವರು ಕರ್ನಾಟಕ ಪ್ರದೇಶ ಬಲಿಜ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಕರ್ನಾಟಕ ಬೇಸ್ ಬಾಲ್ ಸಂಘದ ಸ್ಥಾಪಕ ಆಗಿರುವ ಖ್ಯಾತಿ ಇದೆ. ಎರಡು ದಶಕಗಳಿಂದ ಎಫ್ ಕೆಸಿಸಿಐ ಸದಸ್ಯತ್ವ ಇದ್ದು, ಹಿಂದಿನ ಅಧ್ಯಕ್ಷ ಸಿ .ಆರ್. ಜನಾರ್ಧನ್ ಆಡಳಿತಾವಧಿಯಲ್ಲಿ ಪೆರಿಕರ್ ಉಪಾಧ್ಯಕ್ಷರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News