ಪತ್ರಕರ್ತ ಸಿದ್ದೀಕಿ ಕಪ್ಪನ್ ಬಂಧನ ವಿರೋಧಿಸಿ ಕೇರಳ ಪತ್ರಕರ್ತರ ಸಂಘದ ಪ್ರತಿಭಟನೆ

Update: 2020-10-09 18:08 GMT

ತಿರುವನಂತಪುರ, ಅ.9: ಪತ್ರಕರ್ತ, ಕೇರಳ ಪತ್ರಕರ್ತರ ಸಂಘದ ಸದಸ್ಯ ಸಿದ್ದೀಕಿ ಕಪ್ಪನ್‌ರನ್ನು ದೇಶದ್ರೋಹ ಮತ್ತು ಅಕ್ರಮ ಚಟುವಟಿಕೆ ತಡೆ ಕಾಯ್ದೆಯಡಿ ಉತ್ತರಪ್ರದೇಶ ಪೊಲೀಸರು ಬಂಧಿಸಿರುವುದನ್ನು ಖಂಡಿಸಿ ಸಂಘದ ಆಶ್ರಯದಲ್ಲಿ ಶುಕ್ರವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಯಿತು.

ಕೋಝಿಕೋಡ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿವಿಧ ಮಾಧ್ಯಮ ಸಂಸ್ಥೆಗಳ ಪತ್ರಕರ್ತರು ಭಾಗವಹಿಸಿದ್ದರು. ಇದು ಮಾಧ್ಯಮ ಸ್ವಾತಂತ್ರ್ಯದ ಮೇಲೆ ನಡೆದಿರುವ ಸ್ಪಷ್ಟ ಆಕ್ರಮಣವಾಗಿದೆ. ಹತ್ರಸ್‌ನಲ್ಲಿ ನಡೆದಿರುವ ಗಂಭೀರ ಪ್ರಕರಣದ ವರದಿ ಮಾಡಲು ತೆರಳಿದ್ದ ಸಿದ್ದೀಕಿಯನ್ನು ಬಂಧಿಸಿರುವ ಕ್ರಮ ಖಂಡನೀಯ. ಅವರನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಎಸ್ ಸುಭಾಷ್ ಆಗ್ರಹಿಸಿದರು.

ಹಿರಿಯ ಪತ್ರಕರ್ತ ಕಮಾಲ್ ವರದೂರ್, ಪತ್ರಕರ್ತರ ಸಂಘದ ಉಪಾಧ್ಯಕ್ಷ ಪಿವಿ ಕುಟ್ಟನ್, ಸಂಘದ ಕೋಝಿಕೋಡ್ ಜಿಲ್ಲಾಧ್ಯಕ್ಷ ಫಿರೋಸ್ ಖಾನ್ ಮುಂತಾದವರು ಬಂಧನವನ್ನು ಖಂಡಿಸಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News