ಮಳೆ ನಡುವೆಯೂ ಮುಂದುವರಿದ ಪಿಯು ಉಪನ್ಯಾಸಕರ ಧರಣಿ

Update: 2020-10-19 14:06 GMT

ಬೆಂಗಳೂರು, ಅ.19: ಸೋಮವಾರ ಸುರಿದ ಮಳೆ ನಡುವೆಯೂ ಪಿಯು ಉಪನ್ಯಾಸಕರು ತಮ್ಮ ಪಟ್ಟು ಬಿಡದೇ ಟಾರ್ಪಲ್ ಹಿಡಿದುಕೊಂಡೇ ಧರಣಿ ಮುಂದುವರಿಸಿದ್ದಾರೆ.

ನಗರದ ಮಲ್ಲೇಶ್ವರಂ ಪಿಯು ಬೋರ್ಡ್ ಮುಂಭಾಗ ಪಿಯು ಉಪನ್ಯಾಸಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ನೇಮಕಾತಿಗೆ ಕೌನ್ಸಿಲಿಂಗ್ ಮುಗಿದರೂ ಆದೇಶ ಪ್ರತಿ ನೀಡದ ಹಿನ್ನೆಲೆಯಲ್ಲಿ ಪಿಯು ಉಪನ್ಯಾಸಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಕಳೆದೆಂಟು ದಿನದಿಂದಲೂ ಉಪನ್ಯಾಸಕರು ಚಳಿ, ಮಳೆ ಎನ್ನದೆ ಹೋರಾಟ ನಡೆಸುತ್ತಿದ್ದು, ಆದೇಶ ಪ್ರತಿ ನೀಡುವವರೆಗೂ ಧರಣಿ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News