ಉತ್ತರ ಕರ್ನಾಟಕದ ನೆರೆ ಸಂತ್ರಸ್ತರು ಸರಕಾರದ ಪಾಲಿಗೆ ಅಸ್ಪೃಶ್ಯರೇ: ಪ್ರಿಯಾಂಕ್ ಖರ್ಗೆ ಪ್ರಶ್ನೆ

Update: 2020-10-20 12:55 GMT

ಬೆಂಗಳೂರು, ಅ.20: ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ನೆರೆ ಹಾವಳಿ ಕುರಿತು ರಾಜ್ಯ ಸರಕಾರದ ನಡೆಯನ್ನು ಖಂಡಿಸಿರುವ ಶಾಸಕ ಪ್ರಿಯಾಂಕ್ ಖರ್ಗೆ, ಉತ್ತರ ಕರ್ನಾಟಕ ಭಾಗದ ನೆರೆ ಹಾವಳಿ ಸಂತ್ರಸ್ತರು ಸರಕಾರದ ಪಾಲಿಗೆ ಅದೃಶ್ಯರಾಗಿದ್ದೇವೆಯೇ ಅಥವಾ ಅಸ್ಪೃಶ್ಯರೇ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮಳೆಯಿಂದಾಗಿ ಬೆಂಗಳೂರಿನಲ್ಲಿ ಚರಂಡಿ ಉಕ್ಕಿ ಹರಿದಾಗ, ಇಡೀ ಬಿಜೆಪಿ ಸರಕಾರವೇ ಜನರ ನೆರವಿಗೆ ಓಡಿ ಬರುತ್ತೆ. ಆದರೆ, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಪ್ರವಾಹದಿಂದ ಜನರು ಬೀದಿಪಾಲಾಗಿದ್ದಾರೆ. ಆದರೂ ಸರಕಾರ ಇತ್ತ ಒಮ್ಮೆಯೂ ತಿರುಗಿ ನೋಡುವುದಿಲ್ಲ. ಈ ಭಾಗದ ಲಕ್ಷಾಂತರ ಸಂತ್ರಸ್ತರು ಸರಕಾರದ ಪಾಲಿಗೆ ಅದೃಶ್ಯರಾಗಿದ್ದೇವೆಯೇ ಅಥವಾ ಅಸ್ಪೃಶ್ಯರೇ ಎಂದು ಕಿಡಿ ಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News