ಪಂಜಾಬ್‌ನಲ್ಲಿ ಆರರ ಬಾಲಕಿಯ ಮೇಲೆ ಅತ್ಯಾಚಾರ: ಕಾಂಗ್ರೆಸ್ ಮೌನ ಟೀಕಿಸಿದ ಕೇಂದ್ರ ಸಚಿವ ಜಾವಡೇಕರ್

Update: 2020-10-24 10:00 GMT

ಹೊಸದಿಲ್ಲಿ: ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯಲ್ಲಿ ಬಿಹಾರದಿಂದ ವಲಸೆ ಬಂದಿರುವ ದಲಿತ ಕುಟುಂಬದ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಹಾಗೂ ಹತ್ಯೆ ನಡೆದಿದ್ದು, ಈ ವಿಚಾರವಾಗಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಮೌನವಹಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಇಂದು ಆರೋಪಿಸಿದರು.

 ಘಟನೆಯನ್ನು ಅತ್ಯಂತ ಆಘಾತಕಾರಿ ಎಂದು ಬಣ್ಣಿಸಿದ ಜಾವಡೇಕರ್, ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕಳೆದ ತಿಂಗಳು ಉತ್ತರಪ್ರದೇಶದ ಹತ್ರಸ್ ಜಿಲ್ಲೆಯಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ-ಹತ್ಯೆಗೆ ಸಂಬಂಧಿಸಿ ಬಿಜೆಪಿಯ ವಿರುದ್ಧ ಹರಿಹಾಯ್ದಿದ್ದ ಕಾಂಗ್ರೆಸ್ ನಾಯಕರು 'ರಾಜಕೀಯ ಪ್ರವಾಸ' ನಿಲ್ಲಿಸಿ ಪಂಜಾಬ್, ರಾಜಸ್ಥಾನಕ್ಕೆ ಭೇಟಿ ನೀಡಿ ಮಹಿಳೆಯರಿಗೆ ಆಗುತ್ತಿರುವ ಅಪರಾಧದ ಕುರಿತು ಮಾತನಾಡುವಂತೆ ಆಗ್ರಹಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಕೇಂದ್ರ ಸಚಿವರು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News