ಅಸ್ಗರ್

Update: 2020-11-10 15:36 GMT

ಮಂಗಳೂರು, ನ.10: ದುಬೈನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಸ್ಗರ್ (22) ಹೃದಯಾಘಾತದಿಂದ ಇತ್ತೀಚೆಗೆ ನಿಧನರಾದರು.

ಇವರು ಮಂಜೇಶ್ವರದ ಗುಡ್ಡಕೇರಿ ನಿವಾಸಿ ಅಬ್ದುಲ್ ಕರೀಂ ಅವರ ಪುತ್ರ. ಮೃತದೇಹವನ್ನು ಕೊಲ್ಲಿಯಿಂದ ವಿಮಾನದ ಮೂಲಕ ಕ್ಯಾಲಿಕಟ್ ಏರ್‌ಪೋಟ್‌ಗೆ ತಂದು ನಂತರ ಮಂಜೇಶ್ವರದ ಪೊಸೋಟ್ ಜುಮಾ ಮಸೀದಿಯಲ್ಲಿ ದಫನ್ ಕಾರ್ಯ ನೆರವೇರಿಸಲಾಯಿತು.

ಮೃತರು ಅವಿವಾಹಿತನಾಗಿದ್ದು, ತಂದೆ, ತಾಯಿ, ಇಬ್ಬರು ಸಹೋದರು, ಮೂವರು ಸಹೋದರು ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ