ಹಾಲಿ ಸಚಿವರನ್ನು ಮುಂದಿಟ್ಟು ಸಾರ್ವತ್ರಿಕ ಚುನಾವಣೆ ಗೆಲ್ಲುವುದು ಕಷ್ಟ: ಎಚ್.ವಿಶ್ವನಾಥ್

Update: 2020-11-11 11:56 GMT

ಬೆಂಗಳೂರು ನ.11 ಹಾಲಿ ಸಚಿವ ಸಂಪುಟ ಸದಸ್ಯರನ್ನೆ ಮುಂದಿಟ್ಟುಕೊಂಡು ಸಾರ್ವತ್ರಿಕ ಚುನಾವಣೆ ಎದುರಿಸಿದರೆ, ಗೆಲುವು ಕಷ್ಟವಾಗಬಹುದು ಎಂದು ಬಿಜೆಪಿ ವಿಧಾನ ಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಸಹಜವಾಗಿ ಸರಕಾರದ ಪರವಾಗಿ ಬರುತ್ತದೆ. ಜತೆಗೆ, ಈ ಚುನಾವಣೆಗಳನ್ನು ಸರಕಾರಗಳೇ ನಡೆಸುತ್ತದೆ. ಆದರೆ ಸಾರ್ವತ್ರಿಕ ಚುನಾವಣೆ ಪಕ್ಷ ನಡೆಸುತ್ತದೆ. ಹಾಗಾಗಿ ಹೊಸ ಮುಖಗಳ ಸಂಪುಟದೊಂದಿಗೆ ಹೋಗಬೇಕು ಎಂದು ನುಡಿದರು.

ಆರ್.ಶಂಕರ್ ಹೊಸದಿಲ್ಲಿಗೆ ಹೋಗಿದ್ದು ಗೊತ್ತಿಲ್ಲ. ನಾನು ಅವರ ಜೊತೆ ಹೋಗಲಿಲ್ಲ ಎಂದ ಅವರು, ನಾನು ದೆಹಲಿಯಿಂದ ಕೋಲ್ಕತ್ತಾಗೆ ಹೋಗಿದ್ದೆ, ಮಾರ್ಗ ಮಧ್ಯೆ ಮಹಾಕಾಳಿ ದರ್ಶನಕ್ಕೆ ಹೋಗಿದ್ದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News