ಹಿರಿಯ ಕವಿ ಡಾ.‌ ವಿಸಿ ಐರಸಂಗ ನಿಧನ

Update: 2020-11-13 04:53 GMT

ಧಾರವಾಡ : ಹಿರಿಯ ಕವಿ ಡಾ‌. ವಿ‌ಸಿ ಐರಸಂಗ (91) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಡಾ. ವಿಸಿ ಐರಸಂಗ ಅವರಿಗೆ ಕರ್ಣಾಟಕ ವಿಶ್ವವಿದ್ಯಾಲಯ, ಧಾರವಾಡ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ರಾಗಿ ಆಯ್ಕೆ ಮಾಡಲಾಗಿತ್ತು.

ಡಾ. ವಿಸಿ ಐರಸಂಗ ಸಾವಿರಾರು ಕವನಗಳನ್ನು ಬರೆದಿದ್ದಾರೆ. ಸೈಕಲ್ ಮೇಲೆ ಹೋಗುತ್ತಿದ್ದರು. ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸೈಕಲ್ ಮೇಲೆ ಬಂದಿದ್ದರು. ಸೈಕಲ್ ಕವಿ ಎಂದೂ ಅವರನ್ನು ಕರೆಯುತ್ತಿದ್ದರು.

ಐರಸಂಗ ಅವರು ಪುತ್ರ, ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರ ಇಂದು ಬೆಳಗ್ಗೆ 11.30ಕೈ ಹೊಸ ಯಲ್ಲಾಪೂರ  ರುದ್ರ ಭೂಮಿಯಲ್ಲಿ ಜರುಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News