ಜಾನುವಾರು ತುಂಬಿದ ಕ್ಯಾಂಟರ್ ಪಲ್ಟಿ: ಹತ್ತು ಜಾನುವಾರುಗಳ ಸಾವು

Update: 2020-12-11 17:12 GMT

ಶಿವಮೊಗ್ಗ, ಡಿ.11:ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯ ದಾನಸಾಲೆ ಹೊರಬೈಲು ಬಳಿ ಜಾನುವಾರು ತುಂಬಿದ ಕ್ಯಾಂಟರ್ ಪಲ್ಟಿ ಆಗಿ ಕ್ಯಾಂಟರ್ ನಲ್ಲಿದ್ದ ಸುಮಾರು ಇಪ್ಪತ್ತು ಜಾನುವಾರುಗಳ ಪೈಕಿ ಹತ್ತು ಜಾನುವಾರು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ನಡೆದಿದೆ. ಇನ್ನು ಕೆಲವು ಜಾನುವಾರುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.

ಈ ಕ್ಯಾಂಟರ್ ದಾವಣಗೆರೆಯಿಂದ ಮಂಗಳೂರಿಗೆ ಹೋಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಕ್ಯಾಂಟರ್ ನಲ್ಲಿ ಸಾಗಿಸುತ್ತಿದ್ದ ಜಾನುವಾರುಗಳು ಗೋಶಾಲೆಗೊ ಅಥವಾ ಕಸಾಯಿಖಾನೆಗೂ ಎಂಬುದು ತನಿಖೆಯಿಂದ ಹೊರಬರಬೇಕಿದೆ.

ಘಟನೆ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News