ಬಿಎಸ್‌ವೈ ಹುಚ್ಚಾಸ್ಪತ್ರೆಯ ಪ್ರಮುಖ ವಾರ್ಡ್ ನಲ್ಲಿ ಇರಬೇಕಿತ್ತು ಎಂದ ವಾಟಾಳ್ ನಾಗರಾಜ್

Update: 2021-01-04 16:41 GMT

ಬೆಂಗಳೂರು, ಜ.4: ವಿಧಾನಸೌಧ ಹುಚ್ಚಾಸ್ಪತ್ರೆಯಂತಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹುಚ್ಚಾಸ್ಪತ್ರೆಯ ಪ್ರಮುಖ ವಾರ್ಡ್‍ನಲ್ಲಿ ಇರಬೇಕಿತ್ತು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.

ಸೋಮವಾರ ಮರಾಠ ಪ್ರಾಧಿಕಾರ ರಚನೆಯನ್ನು ವಿರೋಧಿಸಿ ಇಲ್ಲಿನ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಅವರು, ಯಡಿಯೂರಪ್ಪ ಅವರಿಗೆ ಬುದ್ಧಿ, ತಲೆ ಎರಡೂ ಇಲ್ಲ. ಯಡಿಯೂರಪ್ಪ ಹುಚ್ಚಾಸ್ಪತ್ರೆಯ ಪ್ರಮುಖ ವಾರ್ಡ್‍ನಲ್ಲಿ ಇರಬೇಕಿತ್ತು. ಆದರೆ ದುರದೃಷ್ಟವಶಾತ್ ವಿಧಾನಸೌಧದಲ್ಲಿದ್ದಾರೆ ಎಂದರು.

ಜ.6ರಂದು ರಾಜ್ಯಾದ್ಯಂತ ರೈಲು ತಡೆ ಚಳವಳಿಯನ್ನು ಮಾಡಲಾಗುತ್ತದೆ. ಅಂದು ಬೆಂಗಳೂರಿನ ಬಸವಣ್ಣನ ಪ್ರತಿಮೆ ಎದುರು ಮಲಗಿಕೊಂಡು ಹೋರಾಟ ಮಾಡುತ್ತೇವೆಂದು ವಾಟಾಳ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News