ಕುಡಿದ ಮತ್ತಿನಲ್ಲಿ ಕತ್ತು ಹಿಸುಕಿ ಹೆಂಡತಿಯ ಹತ್ಯೆಗೈದ ಗಂಡ

Update: 2021-01-05 18:51 GMT

ಶಿವಮೊಗ್ಗ, ಜ.5: ಕತ್ತು ಹಿಸುಕಿ ಗಂಡನೇ ಹೆಂಡತಿಯ ಹತ್ಯೆ ಮಾಡಿದ ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆಯ ಜಿ ಬ್ಲಾಕ್ ನಲ್ಲಿ ಸಂಭವಿಸಿದೆ. 

ರಝಿಯಾ ಬಾನು ಕೊಲೆಯಾದ ಮಹಿಳೆ. ಈಕೆಯ ಗಂಡ ಅಲ್ಲಾಭಕ್ಷ ಕುಡಿದ ಮತ್ತಿನಲ್ಲಿ ಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ.

ಗಂಡ, ಹೆಂಡತಿ ಮಧ್ಯೆ ಪದೇ ಪದೆ ಗಲಾಟೆಯಾಗುತ್ತಿತ್ತು. ಇವತ್ತು ಕುಡಿದ ಮತ್ತಿನಲ್ಲಿ ಬಂದು ಗಲಾಟೆ ಮಾಡಿದ ಅಲ್ಲಾಭಕ್ಷ, ಹೆಂಡತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಬೊಮ್ಮನಕಟ್ಟೆಯ ಜಿ ಬ್ಲಾಕ್ ನ ಅನ್ನಪೂರ್ಣೇಶ್ವರಿ ದೇವಸ್ಥಾನದ ಬಳಿ ಮನೆಯಲ್ಲಿ ಈ ಘಟನೆ ನಡೆದಿದೆ.

ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್, ಡಿವೈಎಸ್ಪಿ ಉಮೇಶ್ ಈಶ್ವರ್ ನಾಯಕ್, ಇನ್ಸ್ ಪೆಕ್ಟರ್ ವಸಂತ್ ಕುಮಾರ್, ವಿನೋಬನಗರ ಠಾಣೆ ಪಿಎಸ್ಐ ಉಮೇಶ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News