ಸಿದ್ದರಾಮಯ್ಯನವರೇ, ನಿಮ್ಮ ರಾಜಕಾರಣದ ಬುನಾದಿ ದೇವೇಗೌಡರ ಶ್ರಮ: ಬಿ.ಶ್ರೀರಾಮುಲು

Update: 2021-01-14 12:04 GMT

ಬೆಂಗಳೂರು, ಜ.14: ಸಿದ್ದರಾಮಯ್ಯನವರೇ, ನಿಮ್ಮ ರಾಜಕಾರಣದ ಬುನಾದಿ ಶ್ರೀ ಎಚ್.ಡಿ.ದೇವೇಗೌಡರ ಶ್ರಮ. ನೀವು ಜಿಡಿಎಸ್ ಬಿಟ್ಟ ಮೇಲೂ ನಿಮ್ಮಂತೆ ಅವರೆಲ್ಲೂ, ಕುಂತಲ್ಲಿ ನಿಂತಲ್ಲಿ ಗೋಳು ತೋಡಿಕೊಂಡಿಲ್ಲ. ಸಜ್ಜನ ರಾಜಕಾರಣ ಎಂದರೆ ಹಾಗೆ. ಟಿಕೆಟ್ ಕೊಟ್ಟ ಮಾತ್ರಕ್ಕೆ ಯಾರೂ ಗೆಲ್ಲುವುದಿಲ್ಲ. ಜನಬಲ ಮುಖ್ಯ. ನಿಮಗೂ ಚಾಮುಂಡಿಯಲ್ಲಿ ಟಿಕೆಟ್ ಕೊಟ್ಟರು. ಏನಾಯ್ತ? ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

ತಮ್ಮ ಬಾಳೆಯಲ್ಲಿ ಹೆಗ್ಗಣ ಬಿದ್ದಿರುವಾಗ ಪಕ್ಕದ ಬಾಳೆಯಲ್ಲಿ ನೊಣ ಹೊಡೆಯುವ ಉತ್ಸಾಹವೇಕೆ ಸಿದ್ದರಾಮಯ್ಯನವರೇ? ಯಾರು ಯಾಕಾಗಿ ಯಡಿಯೂರಪ್ಪ ಸಾಹೇಬರ ಮೇಲೆ ಆರೋಪ ಹೊರಿಸಿದರು ಎಂಬುದು ಗೊತ್ತಿದೆ. ಆದರೆ ಕೋರ್ಟ್ ಅವರನ್ನು ನಿರ್ದೋಷಿ ಎಂದಿದೆ. ನಿಮ್ಮ ಅಧ್ಯಕ್ಷರು ಜೈಲಿನಲ್ಲಿದ್ದಾಗ ಬಿಟ್ಟ ಗಡ್ಡವನ್ನೇ ಇನ್ನೂ ತೆಗೆದಿಲ್ಲ, ನೆನಪಿರಲಿ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News