ನೂತನ ಸಚಿವ ಅಂಗಾರ, ಯೋಗೇಶ್ವರ್ ಗೆ ಡಿ.ವಿ.ಸದಾನಂದಗೌಡ ಅಭಿನಂದನೆ

Update: 2021-01-14 18:31 GMT

ಬೆಂಗಳೂರು, ಜ.14: ಪಕ್ಷದ ನಿಷ್ಠಾವಂತ ಹಾಗೂ ನೂತನ ಸಚಿವರಾದ ನನ್ನ ಆತ್ಮೀಯ ಮಿತ್ರ ಎಸ್. ಅಂಗಾರ ಅವರನ್ನು ಬೆಂಗಳೂರಿನ ನನ್ನ ನಿವಾಸಕ್ಕೆ ಬರಮಾಡಿಕೊಂಡು ಸನ್ಮಾನಿಸಲಾಯಿತು. 1994ರಲ್ಲಿ ಅವರು ಸುಳ್ಯದಿಂದ ಹಾಗೂ ನಾನು ಪಕ್ಕದ ಪುತ್ತೂರು ಕ್ಷೇತ್ರದಿಂದ ಒಟ್ಟಿಗೇ ವಿಧಾನಸಭೆ ಪ್ರವೇಶಿಸಿದ್ದೆವು. ಶ್ರೀಯುತರಿಗೆ ಹೃತ್ಪೂರ್ವಕ ಅಭಿನಂದನೆ. ಅವರಿಗೆ ಶುಭವಾಗಲಿ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.

ಬೆಂಗಳೂರಿನ ನನ್ನ ಗೃಹಕಚೇರಿಯಲ್ಲಿಂದು ನೂತನ ಸಚಿವ ಆತ್ಮೀಯರಾದ ಸಿ.ಪಿ.ಯೋಗೇಶ್ವರ್ ಅವರನ್ನು ಅಭಿನಂದಿಸಲಾಯಿತು. ಸಚಿವರಾಗಿ ಅವರು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಹಾಗೂ ಉತ್ತಮ ಸಂಘಟಕರಾಗಿ ರಾಮನಗರ ಮತ್ತಿತರ ಹಳೆ ಮೈಸೂರು ಭಾಗಗಳಲ್ಲಿ ಪಕ್ಷದ ಬೇರನ್ನು ಇನ್ನಷ್ಟು ಗಟ್ಟಿಮಾಡುತ್ತಾರೆ ಎಂಬ ಸಂಪೂರ್ಣ ಭರವಸೆ ನಮ್ಮೆಲ್ಲರದ್ದು ಎಂದು ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News