ಶಿವಮೊಗ್ಗ: ರೈಲ್ವೆ ಕ್ರಷರ್ ನಲ್ಲಿ ಡೈನಮೇಟ್ ಸ್ಫೋಟ; 10ಕ್ಕೂ ಹೆಚ್ಚು ಕಾರ್ಮಿಕರು ಮೃತ್ಯು ಶಂಕೆ

Update: 2021-01-21 18:56 GMT

ಶಿವಮೊಗ್ಗ, ಜ.21: ಕಲ್ಲು ಗಣಿಗಾರಿಕೆಗೆ ಸಾಗಿಸುತ್ತಿದ್ದ ಡೈನಮೇಟ್ ಸ್ಫೋಟಗೊಂಡು ಹಲವು ಕಾರ್ಮಿಕರು ಮೃತಪಟ್ಟಿರುವ ಘಟನೆ ಶಿವಮೊಗ್ಗ ತಾಲೂಕಿನ‌ ಅಬ್ಬಲಗೆರೆಯ ಹುಣಸೋಡು ರೈಲ್ವೆ ಕ್ರಷರ್ ನಲ್ಲಿ ನಡೆದಿದೆ.

ಡೈನಮೇಟ್ ಸ್ಫೋಟದಿಂದ ಬಿಹಾರ ಮೂಲದ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಲಾರಿಯಲ್ಲಿ ಜಿಲಿಟಿನ್ ಕಡ್ಡಿಗಳು ಹಾಗೂ ಇನ್ನಿತರೆ ಸ್ಫೋಟಕ ವಸ್ತುಗಳನ್ನು ಶಿವಮೊಗ್ಗಕ್ಕೆ ತರಲಾಗಿತ್ತು. ಈ ವೇಳೆ ಒಂದಕ್ಕೊಂದು ತಗಲಿ ಬ್ಲಾಸ್ಟ್ ಆಗಿದೆ ಎನ್ನಲಾಗುತ್ತಿದ್ದು, ಪರಿಣಾಮ ಲಾರಿ ಮತ್ತು ಕಾರ್ಮಿಕರ ದೇಹಗಳು ಛಿದ್ರ ಛಿದ್ರವಾಗಿ ಹೋಗಿದೆ.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News