ಅಂತಿಂಥವರ ಸಂಪುಟದಲ್ಲಿ ಮಂತ್ರಿಯಾಗುವ ಗಿರಾಕಿ ನಾನಲ್ಲ: ಶಾಸಕ ಯತ್ನಾಳ್

Update: 2021-01-23 16:05 GMT

ಬಳ್ಳಾರಿ, ಜ.23: ವಾಜಪೇಯಿ ಸಂಪುಟದಲ್ಲಿ ಸಚಿವನಾಗಿದ್ದ ನಾನು, ಅಂತಿಂಥವರ ಸಂಪುಟದಲ್ಲಿ ಸಚಿವನಾಗುವ ಗಿರಾಕಿ ನಾನಲ್ಲವೆಂದು ಬಿಜಾಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಿಳಿಸಿದ್ದಾರೆ.

ನಗರದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಜನಜಾಗೃತ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ನನಗೆ ಒದಗಿಸಿದ ಪೊಲೀಸ್ ಸೆಕ್ಯೂರಿಟಿ ಹಿಂಪಡೆದಿದೆ. ಜತೆಗೆ ಗುಪ್ತಚರರನ್ನು ನನ್ನ ಹಿಂದೆ ಬಿಟ್ಟಿದ್ದಾರೆ. ಇವರಿಗೆ ನಾಚಿಕೆ ಆಗಬೇಕೆಂದು ವಾಗ್ದಾಳಿ ನಡೆಸಿದ್ದಾರೆ.

ನನ್ನೆಲ್ಲಾ ಆಸ್ತಿನೂ ಸಕ್ರಮವಾಗಿದೆ. ಹೀಗಾಗಿ ನನ್ನ ವಿರುದ್ದ ಮಸಲತ್ತು ನಡೆಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಮಂತ್ರಿಮಂಡಲದ ವಿಸ್ತರಣೆ ಮಾಡಲು ಯುವರಾಜ್‍ನನ್ನು ಬಳಕೆ ಮಾಡಿಕೊಂಡು, ಈಗ ಆತನ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸಚಿವ ಮುರುಗೇಶ್ ನಿರಾಣಿ ಬೆಕ್ಕಿನ ಜಾತಿಯವರು. 2ಎ ಮೀಸಲಾತಿ ಹೋರಾಟವನ್ನು ಹತ್ತಿಕ್ಕಲು ಷಡ್ಯಂತ್ರ ನಡೆಸುತ್ತಿದ್ದಾರೆ. ಇಂತವರನ್ನು ಜನಪ್ರತಿನಿಧಿಗಳೆಂದು ಕರೆಯಲು ಸಾಧ್ಯವೇ?

-ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News