ಕೇರಳದ ಫೇಸ್‍ಬುಕ್ ಗೆಳೆಯನ ಬಳಿಗೆ ತೆರಳಿದ್ದ ಮಂಡ್ಯದ ಯುವಕ ಈಗ ಕೋಟ್ಯಾಧಿಪತಿ !

Update: 2021-02-09 16:27 GMT

ಮಂಡ್ಯ, ಫೆ.9: ಮದ್ದೂರು ತಾಲೂಕು ಸೋಮನಹಳ್ಳಿಯ ಉದ್ಯಮಿಯೊಬ್ಬರ ಪುತ್ರ ಸೋಹನ್ ಬಲರಾಂ ಕೇರಳದಲ್ಲಿ 100 ರೂ.ಗೆ ತೆಗೆದುಕೊಂಡಿದ್ದ ಲಾಟರಿ ಟಿಕೆಟ್‍ಗೆ 1 ಕೋಟಿ ರೂ. ಬಹುಮಾನ ಬಂದಿದೆ.

ಸೋಹನ್ ಕುಟುಂಬದವರು ಕೇರಳದ ಗೆಳೆಯರೊಬ್ಬರ ಮದುವೆಗೆ ಹೋಗಿ ವಾಪಸ್ ಬರುವಾಗ ಮಾರ್ಗಮಧ್ಯೆ ಪುಥನಾಥಿ ಎಂಬಲ್ಲಿ ಸೋಹನ್ ಫೇಸ್‍ಬುಕ್ ಗೆಳೆಯನ ಬಳಿಗೆ ತೆರಳಿದ್ದರು. ಸೋಹನ್ ಗೆಳೆಯ ಲಾಟರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಗೆ ತೆರಳಿದ್ದ ಸೋಹನ್ ಮತ್ತು ಮತ್ತೊಬ್ಬರು ತಲಾ 100 ರೂ. ಕೊಟ್ಟು ಲಾಟರಿ ಟಿಕೆಟ್ ಕೊಂಡುಕೊಂಡಿದ್ದರು.

ಅದೃಷ್ಟವಶಾತ್ ಸೋಹನ್ ಖರೀದಿಸಿದ್ದ ಲಾಟರಿ ಟಿಕೆಟ್‍ಗೆ 1 ಕೋಟಿ ರೂ. ಬಂಪರ್ ಬಹುಮಾನ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News