ಅತ್ಯಾಚಾರ ಆರೋಪಿ ಟಿವಿ ನಿರೂಪಕನಿಗಾಗಿ ಹುಡುಕಾಡುತ್ತಿರುವ ದಿಲ್ಲಿ ಪೊಲೀಸರು

Update: 2021-02-27 15:10 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಫೆ.27: ಇಟಿ ನೌ ಸುದ್ದಿವಾಹಿನಿಯ ನಿರೂಪಕ ಹಾಗೂ ವಿಶ್ಲೇಷಕ ವರುಣ್ ಹಿರೇಮಠ ತನ್ನ ಮೇಲೆ ಅತ್ಯಾಚಾರವೆಸಗಿರುವುದಾಗಿ 22ರ ಹರೆಯದ ಯುವತಿಯೋರ್ವಳು ದಿಲ್ಲಿಯ ಚಾಣಕ್ಯಪುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು,ತಲೆಮರೆಸಿಕೊಂಡಿರುವ ಆರೋಪಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.

ಮುಂಬೈನ ಉದ್ಯಮಿಯೋರ್ವರ ಪುತ್ರನಾಗಿರುವ ಹಿರೇಮಠ ವಿರುದ್ಧ ಮೂರು ದಿನಗಳ ಹಿಂದೆ ಈ ದೂರು ದಾಖಲಾಗಿದೆ.

ಹಿರೇಮಠಗಾಗಿ ನಾವು ಶೋಧಿಸುತ್ತಿದ್ದೇವೆ. ಅವರು ತನಿಖೆಯನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಪೊಲೀಸರು ತಿಳಿಸಿದರು.

ಫೆ.21ರಂದು ದಿಲ್ಲಿಯ ಖಾನ್ ಮಾರ್ಕೆಟ್‌ನಲ್ಲಿ ತಾವಿಬ್ಬರೂ ಭೇಟಿಯಾಗಿದ್ದೆವು ಮತ್ತು ಆರೋಪಿಯು ತನ್ನನ್ನು ಚಾಣಕ್ಯಪುರಿಯ ಹೋಟೆಲ್ಲೊಂದಕ್ಕೆ ಕರೆದೊಯ್ದು ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಹಿರೇಮಠ ಮತ್ತು ಯುವತಿ ಕಳೆದ ಮೂರು ವರ್ಷಗಳಿಂದಲೂ ಪರಸ್ಪರ ಪರಿಚಿತರಾಗಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News