ಬಿಸಿ ನೀರು ಚೆಲ್ಲಿ ಬಾಲಕಿ ಮೃತ್ಯು: ನಾಲ್ವರು ಗಂಭೀರ

Update: 2021-03-03 17:26 GMT

ಯಾದಗಿರಿ, ಫೆ.3: ಬಿಸಿ ನೀರು ಚೆಲ್ಲಿ ಓರ್ವ ಬಾಲಕಿ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಸುರಪುರ ತಾಲೂಕಿನ ದೊಡ್ಡ ತಾಂಡದಲ್ಲಿ ನಡೆದಿದೆ.

ಬೆಳಗ್ಗೆ ಜಾತ್ರೆಗೆ ಹೋಗಬೇಕೆಂದು ಕುಟುಂಬಸ್ಥರು ನೀರು ಕಾಯಿಸಿದ್ದರು. ಆದರೆ ನಾಯಿ ತಾಗಿ ಬಿಸಿ ನೀರು ಕೆಳಕ್ಕೆ ಚೆಲ್ಲಿದ ಪರಿಣಾಮ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟು, ಇನ್ನುಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಆರತಿ ಎಂಬ 6 ವರ್ಷದ ಬಾಲಕಿ ಮೃತಪಟ್ಟಿದ್ದು, ನೆಹರು(47) ತಾರಿಬಾಯಿ (35) ಗೀತ (8) ಯುವರಾಜ (5) ಎಂಬವರು ಗಂಭೀರವಾಗಿ ಗಾಯಗೊಂಡವರಾಗಿದ್ದಾರೆ.

ಎಲ್ಲರನ್ನೂ ಚಿಕಿತ್ಸೆಗಾಗಿ ಶಹಾಪುರದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಆರತಿ ಎಂಬ ಬಾಲಕಿ ಮೃತಪಟ್ಟರೆ ಇನ್ನುಳಿದ ಎಲ್ಲರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿಗೆ ರವಾನಿಸಲಾಗಿದೆ.

ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News