ರಾಮರಾಯ ನಾಯಕ್
Update: 2021-03-29 12:36 GMT
ಶಿರ್ವ, ಮಾ.29: ಬಂಟಕಲ್ಲು ಸಮೀಪದ ಸಡಂಬೈಲು ಮೇಲ್ಮನೆ ಬಿ.ರಾಮರಾಯ ನಾಯಕ್ (77) ಅಲ್ಪಕಾಲದ ಅಸೌಖ್ಯದಿಂದ ರವಿವಾರ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕರ್ನಾಟಕ ವಾರ್ತಾ ಮತ್ತು ಪ್ರಸಾರ ಇಲಾಖೆಯಲ್ಲಿ ಸುಮಾರು 40 ವರ್ಷಗಳ ಕಾಲ ಪ್ರಥಮ ದರ್ಜೆ ಗುಮಾಸ್ತರಾಗಿ ಕರ್ತವ್ಯದಲ್ಲಿದ್ದ ಇವರು, ಮಡಿಕೇರಿ, ಮಂಗಳೂರು ಮತ್ತು ಉಡುಪಿ ಜಿಲ್ಲಾ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದರು.
ಇವರು ಪತ್ನಿ, ಉಡುಪಿ ಸಿಟಿ ಆಸ್ಪತ್ರೆಯ ಖ್ಯಾತ ಮೂಳೆತಜ್ಞ ಡಾ.ಹರೀಶ್ ಆರ್.ನಾಯಕ್ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗು ಅಪಾರ ಬಂಧುಗಳನ್ನು ಅಗಲಿದ್ದಾರೆ