18 ಡಿವೈಎಸ್ಪಿ, 100 ಪೊಲೀಸ್ ಇನ್‍ಸ್ಪೆಕ್ಟರ್ ಗಳ ವರ್ಗಾವಣೆ

Update: 2021-03-29 16:10 GMT

ಬೆಂಗಳೂರು, ಮಾ.29: ರಾಜ್ಯ ಪೊಲೀಸ್ ಇಲಾಖೆಯ 18 ಡಿವೈಎಸ್ಪಿ ಹಾಗೂ 100 ಪೊಲೀಸ್ ಇನ್‍ಸ್ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಿ ಸೋಮವಾರ ಆದೇಶ ಹೊರಡಿಸಲಾಗಿದೆ.

ಮಂಗಳೂರು ನಗರದ ಕೇಂದ್ರ ಉಪವಿಭಾಗದ ಡಿವೈಎಸ್ಪಿ ಎಂ.ಜಗದೀಶ್ ಅವರನ್ನು ಎಸಿಬಿಗೆ ವರ್ಗಾವಣೆಗೊಳಿಸಿ, ಸಿಐಡಿ ಡಿವೈಎಸ್ಪಿ ಪರಮೇಶ್ವರ ಹೆಗಡೆ ಅವರನ್ನು ಮಂಗಳೂರು ನಗರದ ಕೇಂದ್ರ ಉಪವಿಭಾಗಕ್ಕೆ ನಿಯೋಜಿಸಲಾಗಿದೆ.

ಅದೇ ರೀತಿ, ಮಂಗಳೂರು ಪಶ್ಚಿಮ ವಲಯದ ಐಜಿಪಿ ಕಚೇರಿಯಲ್ಲಿ ಶಂಕರ ಕೆ.ಮಾರಿಹಾಳ್ ಅವರನ್ನು ಹಾವೇರಿ ಉಪವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಒಟ್ಟಾರೆ 18 ಡಿವೈಎಸ್ಪಿ ಹಾಗೂ 100 ಪೊಲೀಸ್ ಇನ್‍ಸ್ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News