ಅಷ್ಟೊಂದು ಸೋಲಿನ ಭಯ ಕಾಡಲು ಕಾರಣವೇನು?: ಸಿದ್ದರಾಮಯ್ಯರಿಗೆ ಬಿಜೆಪಿ ಪ್ರಶ್ನೆ

Update: 2021-04-03 12:59 GMT

ಬೆಂಗಳೂರು, ಎ. 3: ‘ಸಿದ್ದರಾಮಯ್ಯನವರೇ ಸೋಲಿನ ಭಯದಿಂದ ರಾಹುಲ್ ಕೇರಳಕ್ಕೆ ವಲಸೆ ಬಂದರು, ಸೋಲೇ ಕಾಣದ ಖರ್ಗೆಯವರು ಸೋತರು, ಮುಖ್ಯಮಂತ್ರಿಯಾಗಿದ್ದಾಗಲೇ ತಾವು ಸೋತಿದ್ದೀರಿ, ಸ್ವ ಕ್ಷೇತ್ರಗಳಲ್ಲಿ ಗೆಲ್ಲಲಾರದವರು ವಲಸೆ ಕ್ಷೇತ್ರದಲ್ಲಿ ಗೆಲ್ಲುವ ಕನಸು ಕಾಣುವುದೇಕೆ?' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಜೆಡಿಎಸ್ ಪಕ್ಷದಿಂದ ವಲಸೆ ಬಂದು ಕಾಂಗ್ರೆಸ್ ಪಕ್ಷದಲ್ಲಿ ಗೂಡು ಕಟ್ಟಿದಿರಿ. ಮುಖ್ಯಮಂತ್ರಿಯಾಗಿದ್ದುಕೊಂಡೇ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸೋತು ಬಾದಾಮಿಯಲ್ಲಿ ಉಸಿರು ಗಟ್ಟಿಸಿಕೊಂಡು ಗೆದ್ದಿದ್ದೀರಿ. ಈಗ ಗೆಲುವಿಗಾಗಿ ಕ್ಷೇತ್ರದ ಹುಡುಕಾಟ ನಡೆಸುತ್ತಿದ್ದೀರಿ. ಅಷ್ಟೊಂದು ಸೋಲಿನ ಭಯ ಕಾಡಲು ಕಾರಣವೇನು?' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News