ಬೇಲೂರು; ಅಭ್ಯರ್ಥಿಗಳ ಆಯ್ಕೆ ಸಮಿತಿಯಲ್ಲಿ ಮುಸ್ಲಿಂ ಮುಖಂಡರ ಸೇರ್ಪಡೆ: ವಾರ್ತಾಭಾರತಿ ಸುದ್ದಿ ಎಫೆಕ್ಟ್

Update: 2021-04-04 10:59 GMT

ಬೇಲೂರು: ಪುರಸಭೆ ಚುನಾವಣೆ  ಸಂಬಂಧಿಸಿದಂತೆ ಸೂಕ್ತ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗಾಗಿ ರಚಿಸಲಾಗಿರುವ ಸಮಿತಿಯಲ್ಲಿ ಮುಸ್ಲಿಮರನ್ನು ಕಡೆಗಳಿಸಲಾಗಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಮುಸ್ಲಿಂ ಮುಖಂಡರ ಹೆಸರನ್ನು ಸೇರಿಸಲಾಗಿದೆ.

ಜಿ ಪಂ ಸದಸ್ಯ ಸಯ್ಯದ್ ತೋಫಿಕ್ ರವರನ್ನು ಪಟ್ಟಿಯಲ್ಲಿ ಸೇರಿಸಿರುವ ಆದೇಶ ಪತ್ರವನ್ನು  ಸಲೀಂ ಅಹಮ್ಮದ್ ರವರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜವಾಗಾಲ್ ಮಂಜುನಾಥ್ ರವರಿಗೆ ರವಾನಿಸಿದ್ದಾರೆ. ಇವರೊಂದಿಗೆ ಸಫಾಯಿ ಕರ್ಮಚಾರಿ ನಿಗಮದ ಮಾಜಿ ಅಧ್ಯಕ್ಷ ಎಂ ಆರ್ ವೆಂಕಟೇಶ ಹೆಸರು ಸೇರ್ಪಡೆಯಾಗಿದೆ.

ಅಭ್ಯರ್ಥಿಗಳ ಆಯ್ಕೆ ಸಮಿತಿಯಲ್ಲಿ ಮುಸ್ಲಿಂ ಮುಖಂಡರ ಹೆಸರು ಇಲ್ಲದಿರುವ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ವಾರ್ತಾಭಾರತಿ ವರದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News