ಎಲ್ಲರೂ ಸೇರಿ ಕೊರೋನ ಮಣಿಸೋಣ: ಸಿಎಂ ಯಡಿಯೂರಪ್ಪ ಕರೆ

Update: 2021-04-10 12:44 GMT

ಬೆಂಗಳೂರು, ಎ.10: ನಾಗರಿಕ ಬಂಧುಗಳೇ, ಕೊರೋನ ನಿಯಂತ್ರಣಕ್ಕೆ ನಿಮ್ಮ ಸಹಕಾರ, ಸುರಕ್ಷತಾ ಮಾರ್ಗಸೂಚಿಗಳ ಸಮರ್ಪಕ ಪಾಲನೆ ಅತ್ಯಗತ್ಯ. ನಿಮ್ಮ, ನಿಮ್ಮ ಕುಟುಂಬದ ಹಾಗೂ ಸಮಾಜದ ಸುರಕ್ಷತೆಗೆ ಕೋವಿಡ್ ಸಾಂಕ್ರಾಮಿಕವನ್ನು ನಿರ್ಲಕ್ಷಿಸದಿರಿ. 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಿರಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ತಪ್ಪದೇ ಲಸಿಕೆ ಪಡೆಯಿರಿ, ಸುರಕ್ಷತಾ ನಿಯಮಗಳ ಪಾಲನೆ ತಪ್ಪಿಸದಿರಿ. ನಿಮ್ಮ ಕುಟುಂಬದ ಹಿರಿಯರಿಗೆ, 45 ವರ್ಷ ಮೇಲ್ಪಟ್ಟ ಬಂಧುಮಿತ್ರರು, ಆತ್ಮೀಯರು, ನೆರೆಹೊರೆಯವರು ಎಲ್ಲರಿಗೂ ಕೋವಿಡ್19 ಲಸಿಕೆ ಪಡೆಯಲು ಪ್ರೇರೇಪಿಸಿ, ಜಾಗೃತಿ ಮೂಡಿಸಿ. ಎಲ್ಲರೂ ಕೂಡಿ ಕೊರೋನ ಸಾಂಕ್ರಾಮಿಕವನ್ನು ಮಣಿಸೋಣ ಎಂದು ಅವರು ಟ್ವೀಟ್ ಮೂಲಕ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News