ಸೈಯದ್ ಇಸಾಕ್ ರ ಗ್ರಂಥಾಲಯ ಬೀಡಿ ಕಿಡಿಯಿಂದ ಸುಟ್ಟುಹೋಗಿದೆ: ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ
Update: 2021-04-17 12:56 GMT
ಮೈಸೂರು, ಎ.17: ರಾಜೀವ್ ನಗರದ ಸೈಯದ್ ಇಸಾಕ್ ಅವರ ಗ್ರಂಥಾಲಯ ಬೀಡಿ ಕಿಡಿಯಿಂದ ಸುಟ್ಟುಹೋಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸ್ಪಷ್ಟಪಡಿಸಿದರು.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಘಟನೆಯ ಹಿಂದೆ ದುರುದ್ದೇಶಗಳಿರಬಹುದು ಎಂಬ ಸುದ್ದಿ ಹರಿದಾಡುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದರು. ವ್ಯಕ್ತಿಯೋರ್ವ ಬೀಡಿ ಸೇದಿ ಎಸೆದಿರುವ ವಿಡೀಯೊ ತೋರಿಸಿದ ಅವರು, ಬೀಡಿ ಸೇದಿ ಎಸೆದಿರುವ ವ್ಯಕ್ತಿಗೂ ಸೈಯದ್ ಇಸಾಕ್ ಅವರಿಗೂ ಯಾವುದಾದರೂ ವೈಷಮ್ಯ ಇದೆಯೇ ಎನ್ನುವ ಬಗ್ಗೆ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
ಗ್ರಂಥಾಲಯದ ಸಮೀಪ ಸೋಫಾ ರಿಪೇರಿ ಮಾಡುವ ಅಂಗಡಿ ಇದ್ದ ಕಾರಣ ಬೀಡಿ ಕಿಡಿ ನಿಧಾನವಾಗಿ ಹೊತ್ತಿಕೊಂಡಿರಬಹುದು ಎಂದು ಅವರು ಹೇಳಿದರು.