'ಕೆಮಿಸ್ಟ್ರಿ ಆಫ್ ಕರಿಯಪ್ಪ' ಚಿತ್ರದ ನಿರ್ಮಾಪಕ ಮಂಜುನಾಥ್ ಕೋವಿಡ್ ನಿಂದ ನಿಧನ

Update: 2021-04-18 17:04 GMT

ಬೆಂಗಳೂರು, ಎ.18: ಸಿನೆಮಾ ನಿರ್ಮಾಪಕ ಹಾಗೂ ನಟ ಡಾ.ಡಿ.ಎಸ್.ಮಂಜುನಾಥ್(ಅರ್ಜುನ್ ಮಂಜುನಾಥ್) ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಅವರು ಕೆಮಿಸ್ಟ್ರಿ ಆಫ್ ಕರಿಯಪ್ಪ, ಸಂಯುಕ್ತ-2 ಚಿತ್ರಗಳನ್ನು ನಿರ್ಮಿಸಿದ್ದರು. ಚಿತ್ರ ನಿರ್ಮಾಣ ಹಾಗೂ ಸಾಹಿತ್ಯ ರಚನೆಯಲ್ಲಿ ಸಕ್ರಿಯರಾಗಿದ್ದ ಅವರು, ಝಿರೋ ಲವ್ ಹೆಸರಿನ ಸಿನೆಮಾವನ್ನು ನಿರ್ಮಿಸಿ ನಟಿಸಿದ್ದರು. ಅವರ ಅಗಲಿಕೆಗೆ ಚಿತ್ರರಂಗ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News