ಶಿವಮೊಗ್ಗ: ಲಸಿಕೆ ಇಲ್ಲ ಎಂದು ಬೋರ್ಡ್ ಹಾಕಿದ್ದ ವೈದ್ಯರು, ಸಿಬ್ಬಂದಿಗೆ ನೋಟಿಸ್
Update: 2021-04-18 19:00 GMT
ಶಿವಮೊಗ್ಗ: ಶ್ರೀರಾಮನಗರದ ನಗರ ಆರೋಗ್ಯ ಕೇಂದ್ರದಲ್ಲಿ ಎ.19ರಂದು ಲಸಿಕೆ ಇರುವುದಿಲ್ಲ ಎಂದು ಬೋರ್ಡ್ ಹಾಕಿದ್ದ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ.
ರವಿವಾರ ಈ ಕೇಂದ್ರದಲ್ಲಿ ನೂರಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ. ಲಸಿಕೆ ಲಭ್ಯವಿದ್ದರೂ ಸೋಮವಾರ ಲಸಿಕೆ ಸಿಗುವುದಿಲ್ಲ ಎಂದು ತಪ್ಪು ಮಾಹಿತಿ ಹಾಕಿ ಜನರಲ್ಲಿಗೊಂದಲ ಉಂಟು ಮಾಡಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರವಿವಾರ ಜಿಲ್ಲೆಯಲ್ಲಿ 3,800 ಜನರಿಗೆ ವ್ಯಾಕ್ಸಿನ್ ಹಾಕಲಾಗಿದ್ದು, ಜಿಲ್ಲೆಯಲ್ಲಿ ಲಸಿಕೆಗೆ ಕೊರತೆ ಇಲ್ಲ ಎಂದು ತಿಳಿಸಲಾಗಿದೆ.