ಸಚಿವೆ ಶಶಿಕಲಾ ಜೊಲ್ಲೆ ಒಡೆತನದ ಬೃಹತ್ ಮಳಿಗೆಗೆ ಬೀಗ ಜಡಿದ ಅಧಿಕಾರಿಗಳು !

Update: 2021-04-29 16:45 GMT

ಬೆಂಗಳೂರು, ಎ.29: ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ವ್ಯಾಪಾರ ಮುಂದುವರಿಸಿದ್ದ ಆರೋಪ ಸಂಬಂಧ ಸಚಿವೆ ಶಶಿಕಲಾ ಜೊಲ್ಲೆ ಒಡೆತನದ್ದು ಎನ್ನಲಾದ ಜ್ಯೋತಿ ಬಜಾರ್ ಮಳಿಗೆಗೆ ಚಿಕ್ಕೋಡಿ ಪುರಸಭೆ ಅಧಿಕಾರಿಗಳು ಬೀಗ ಹಾಕಿದ್ದಾರೆ. 

ಗುರುವಾರ ಪುರಸಭೆಯ ಮುಖ್ಯಾಧಿಕಾರಿ ಅಪೂರ್ವ ಬೀದ್ರಿ ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಇಲ್ಲಿನ ಚಿಕ್ಕೋಡಿ ಪಟ್ಟಣದಲ್ಲಿರುವ ಜ್ಯೋತಿ ಬಜಾರ್ ನಲ್ಲಿರುವ ಮಳಿಗೆಯನ್ನು ಸೀಲ್ ಮಾಡಿ ಬಂದ್ ಮಾಡಿದರು.

ಕೋವಿಡ್ ನಿಯಮ ಗಾಳಿಗೆ ತೂರಿ ವ್ಯಾಪಾರ ನಡೆಸುತ್ತಿದ್ದರು. ಅಷ್ಟೇ ಅಲ್ಲದೆ, ಕರ್ಫ್ಯೂ ಅವಧಿ ಮೀರಿ ಅಂಗಡಿ ಏಕೆ ತೆಗೆಯಲಾಗಿದೆ ಎಂದು ಜ್ಯೋತಿ ಬಜಾರ್ ಸಿಬ್ಬಂದಿಗೆ ಅಪೂರ್ವ ಬೀದ್ರಿ ತರಾಟೆಗೆ ತೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News