ಬಾಡಿಗೆದಾರರ ತೆರವು, ಉದ್ಯೋಗದಿಂದ ವಜಾ, ವೇತನ ಕಡಿತ ಮಾಡಬೇಡಿ: ಸರಕಾರದ ಮುಖ್ಯ ಕಾರ್ಯದರ್ಶಿ

Update: 2021-04-29 17:32 GMT

ಬೆಂಗಳೂರು, ಎ. 20: ಕೋವಿಡ್ ಕರ್ಫ್ಯೂ ಅವಧಿಯಲ್ಲಿ ಅಂಗಡಿ, ಮನೆ ಮಾಲಕರು ಬಾಡಿಗೆದಾರರ ತೆರವು, ಉದ್ಯೋಗದಾತರು ಉದ್ಯೋಗಸ್ಥರನ್ನು ಕೆಲಸದಿಂದ ವಜಾ ಹಾಗೂ ಅವರ ವೇತನ ಕಡಿತಗೊಳಿಸದಿರಲು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಮನವಿ ಮಾಡಿದ್ದಾರೆ.

ಗುರುವಾರ ಈ ಸಂಬಂಧ ಆದೇಶವೊಂದನ್ನು ಹೊರಡಿಸಿರುವ ಅವರು, ಮನೆ ಮಾಲಕರು ಮನೆಗಳನ್ನು, ಪಿಜಿ, ಅಂಗಡಿಗಳನ್ನು ಬಾಡಿಗೆ ಅಥವಾ ಭೋಗ್ಯದ ಆಧಾರದ ಮೇಲೆ ನೀಡಿರುವ ಮೇಲ್ಕಂಡವರನ್ನು ತೆರವುಗೊಳಿಸಲು ಕ್ರಮ ವಹಿಸಿರುವುದು ಸರಕಾರದ ಗಮನಕ್ಕೆ ಬಂದಿದೆ. ಆದುದರಿಂದ ಸದರಿ ವಾಸದಿಂದ ಬಲವಂತವಾಗಿ ತೆರವುಗೊಳಿಸಬಾರದು ಎಂದು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News