ಸಿಎಂ ಜಮೀಲಾ ದಾವೂದ್

Update: 2021-05-01 05:50 GMT

ಮಂಗಳೂರು : ಮುಲ್ಕಿ ನಿವಾಸಿ, ನೂರ್ ಖಂಡಿ ಮನೆತನದ ದಿ. ಸಿಎಂ ಅಬೂಬಕರ್ ಅವರ ಪುತ್ರಿ ಪ್ರಸ್ತುತ ಪಡೀಲ್ ನಲ್ಲಿ ವಾಸವಿದ್ದ ದಾವೂದ್ ಇಬ್ರಾಹಿಂ ಉಳ್ಳಾಲ ಅವರ ಪತ್ನಿ ಸಿಎಂ ಜಮೀಲಾ ದಾವೂದ್ (58) ಅವರು ಅಲ್ಪ ಕಾಲದ ಅಸೌಖ್ಯದ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ನಿಧನರಾದರು.

ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಇಂದು ಮಧ್ಯಾಹ್ನದ ಸುಮಾರಿಗೆ ಮುಲ್ಕಿ ಶಾಫಿ ಜುಮಾ ಮಸೀದಿಯ ವಠಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ