ಅನಂತ ಆಚಾರ್
Update: 2021-05-03 15:21 GMT
ಉಡುಪಿ, ಮೇ 3: ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿದ್ದ ಉಡುಪಿ ಪುತ್ತೂರಿನ ಅನಂತ ಆಚಾರ್ (38) ಇಂದು ನಿಧನರಾಗಿದ್ದಾರೆ. ಪುತ್ತೂರಿನ ಪಿ.ಶ್ರೀಕಾಂತ ಆಚಾರ್ಯ ಎಂಬವರ ಪುತ್ರರಾದ ಇವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ನಿಟ್ಟೂರು ಪ್ರೌಢ ಶಾಲೆಯ ಹಳೆವಿದ್ಯಾರ್ಥಿಯಾಗಿದ್ದ ಇವರ ನಿಧನಕ್ಕೆ ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಶಾಸಕ ಕೆ.ರಘುಪತಿ ಭಟ್, ಕಾರ್ಯದರ್ಶಿ ಮುರಲಿ ಕಡೆಕಾರ್, ಮುಖ್ಯ ಶಿಕ್ಷಕಿ ಅನಸೂಯ ಹಾಗೂ ಇತರರು ಸಂತಾಪ ವ್ಯಕ್ತಿಪಡಿಸಿದ್ದಾರೆ.