ಮಂಡ್ಯ: ಆಕ್ಸಿಜನ್ ಬೆಡ್ ಸಿಗದೆ ಕೊರೋನ ಸೋಂಕಿತ ವ್ಯಕ್ತಿ ಸಾವು

Update: 2021-05-04 15:03 GMT

ಮಂಡ್ಯ, ಮೇ4: ಆಕ್ಸಿಜನ್ ಇರುವ ಬೆಡ್ ಸಿಗದೆ ಕೊರೋನ ಸೋಂಕಿತ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಾಗಮಂಗಲದಲ್ಲಿ ನಡೆದಿದೆ.

ಮಂಡ್ಯದ ಶ್ರೀರಾಮನಗರದ ನಿವಾಸಿ ಧನಂಜಯ(42) ಮೃತರು. ಇವರಿಗೆ ಎ.27ರಂದು ಸೋಂಕು ಕಾಣಿಸಿಕೊಂಡಿತ್ತು. ವೈದ್ಯರ ಸಲಹೆ ಪಡೆದು ಹೋಂ ಐಸೋಲೇಷನ್ ನಲ್ಲಿ ಇದ್ದರು.

ಎರಡು ದಿನದ ನಂತರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಜಿಲ್ಲೆಯ ಹಲವಾರು ಆಸ್ಪತ್ರೆಗಳಿಗೆ ಅಲೆದಾಡಿದ್ದು, ಕೊನೆಗೆ ನಾಗಮಂಗಲದ ಅಸ್ಪತ್ರೆಯಲ್ಲಿ ಮೃತಪಟ್ಟರೆಂದು ವರದಿಯಾಗಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News